ಕಲಬುರಗಿ ರಸ್ತೆಗೆ ಇಳಿದ ಎಲೆಕ್ಟ್ರಿಕ್ ಇಟೆಕ್-9.0; ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ಜಿ. ಪಾಟೀಲ ಬಿಡುಗಡೆ

0
16

ಕಲಬುರಗಿ: ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜನಸಂಚಾರ ಮಾತ್ರವಲ್ಲದೇ ಆರ್ಥಿಕ ಅಭಿವೃದ್ಧಿಗೆ ಎಲೆಕ್ಟ್ರಿಕ್ ಇಟೆಕ್-9.0 ವಾಹನಗಳು ಕೊಡುಗೆ ನೀಡಲಿವೆ ಎಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಭಿಪ್ರಾಯಪಟ್ಟರು.

ಕಲಬುರಗಿಯ ಸಿದ್ದೇಶ್ವರ ಕಲ್ಯಾಣ ಮಂಟದಲ್ಲಿ ನಡೆದ ಎಲೆಕ್ಟ್ರಿಕ್ ಇಟೆಕ್-9.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಕಳೆದ ಹದಿಮೂರು ವರ್ಷಗಳಿಂದ ಶ್ರೀಕಲ್ಯಾಣ್ ಬಜಾಜ್ ಸಂಸ್ಥೆ ಜನ ಸಂಚಾರ ಸುಗಮಗೊಳಿಸಲು ಹಾಗೂ ಪರಿಸರಕ್ಕೆ ?ಪೂರಕವಾಗಿರುವ ಆಟೊಗಳನ್ನು ಮಾರುಕಟ್ಟೆಗೆ ನೀಡುತ್ತಲೇ ಬಂದಿದೆ. ಈಗ ಅದರ ಇವಿ ಆವೃತ್ತಿ ಜನರಿಗೆ ಕಡಿಮೆ ದರಲ್ಲಿ ಸೇವೆ ನೀಡಲು ಅನುವಾಗಲಿದೆ ಎಂದರು.

ಪರಿಸರಕ್ಕೆ ಹಾನಿ ಮಾಡದ ವಾಹನಗಳು ಕಲ್ಯಾಣ ಕರ್ನಾಟಕಕ್ಕೆ ಇನ್ನಷ್ಟು ಬೇಕಾಗಿದೆ. ಮಾಲಿನ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು. ಇದು ಎಲ್ಲರ ಧೈಯವಾಗಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರು, ನಗರದ ಜನಸಂಚಾರ ಸುಗಮಗೊಳಿಸುವ ಯಾವುದೇ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ನೀಡುತ್ತಲೇ ಬಂದಿವೆ. ಕಡಿಮೆ ಖರ್ಚಿನಲ್ಲಿ ಜನರು ಸಂಚಾರ ಮಾಡಲು ಇವಿ ಆಟೋಗಳು ಸಹಕಾರಿಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆ ದಿನೇ ದಿನೇ ಸಾಕಾರಗೊಳ್ಳುತ್ತಿರುವುದು ಸಂತಸವಾಗುತ್ತದೆ ಎಂದರು.

ಬಜಾಜ್ ಸಂಸ್ಥೆ ವಿಶ್ವದ 70 ದೇಶಗಳಲ್ಲಿ ತನ್ನ ಆಟೋ ಸೇವೆಗಳನ್ನು ಒದಗಿಸುತ್ತದೆ. ಕೇವಲ 3 ಗಂಟೆ ಚಾರ್ಚ್ ಮಾಡಿದರೆ ಬರೋಬ್ಬರಿ 178 ಕಿ. ಮೀಟರ್ ಸಾಗುವ ಈ ಆಟೋಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ಉಳಿತಾಯ ಸಾಧ್ಯವಾಗುವುದಲ್ಲದೇ ಜನರ ಹಾಗೂ ಆಟೊ ಮಾಲೀಕರ ಜೀವನ ಮಟ್ಟ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದರೂ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀಕಲ್ಯಾಣ್ ಬಜಾಜ್ ಸಂಸ್ಥೆಯ ಪಾಲುದಾರರಾದ ಅರುಣ್ ಭಟ್, ಸತ್ಯನಾಥ್ ಶೆಟ್ಟಿ ಹಾಗೂ ವಿದ್ಯಾಧರ್ ಭಟ್ ಇದ್ದರು. ಮಾರುಕಟ್ಟೆ ವಿಭಾಗದ ಪ್ರಾದೇಶಿಕ ಮ್ಯಾನೇಜರ್ ಎ.ರಾಘವೇಂದ್ರ, ಸರ್ವೀಸ್ ವಿಭಾಗದ ಪ್ರಾದೇಶಿಕ ಮ್ಯಾನೇಜರ್ ಅನಂತಪದ್ಮನಾಭ್, ಏರಿಯಾ ಸೇಲ್ಸ್ ಮ್ಯಾನೇಜರ್‍ಗಳಾದ ವೆಂಕಟೇಶ್ ಎಂ.ಎ, ಹಾಗೂ ವಿಶ್ವನಾಥ್ ಹಾನಗಲ್ ಅವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here