ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪುರೈಕೆ

0
55

ಕಲಬುರಗಿ: ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಮಿತಿಯ ರಾಷ್ಟ್ರಯ ಸಂಸ್ಥಾಪಕ ಅಧ್ಯಕ್ಷರಾದ ದೇವ ಮಾನವ ಹವಾ ಮಲ್ಲಿನಾಥ ಮಹಾರಾಜರ ನಿರಗುಡಿ ಅವರ ೫೨ನೇ ಜನ್ಮ ದಿನದ ನಿಮಿತ್ತ ೫೨ ಮಾಜಿ ಯೋಧರನ್ನು ಸನ್ಮಾನಿಸಿ, ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಅಕ್ಕಿ, ಗೋಧಿ, ವಿವಿಧ ಬೇಳೆ, ಬಟ್ಟೆಗಳನ್ನು ತಲುಪಿಸುವ ವಾಹನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನೀಲಕಂಠರಾವ ಮೂಲಗೆ, ಶರಣಬಸಪ್ಪಾ ಹಿರಾ, ರಾಜಿರಾವ ಪಾಟೀಲ್, ವೈಜನಾಥ ಎಸ್.ಝಳಕಿ, ಸಂದೇಶ ಪವಾರ, ಸರ್ಯಕಾಂತ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here