ಸಹಕಾರ ಸಂಘದ ಚುನಾವಣೆ: ಸದಾನಂದ ಕುಂಬಾರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

0
22

ಶಹಾಬಾದ : ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸದಾನಂದ ಕುಂಬಾರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಸಹಕಾರ ಸಂಘಗಳ ಎಆರಸಿ ರವೀಂದ್ರ ಅವರು ಮಾತನಾಡಿ, ಸಹಕಾರಿ ಸಂಘಗಳಿಗೆ ಗ್ರಾಹಕರು ದೇವರಿದ್ದಂತೆ. ಅವರ ಪ್ರಾಮಾಣಿಕ ಸೇವೆಯೇ ಸಹಕಾರ ಸಂಘದ ಏಳ್ಗೆಗೆ ಅಡಿಪಾಯ. ಸಹಕಾರ ಸಂಸ್ಥೆಗಳಿಗೆ ಹಣ ಗಳಿಕೆ ಜತೆ ಗ್ರಾಹಕರ ಆರ್ಥಿಕ ಬಲವರ್ಧನೆ ಗುರಿ ಇರಬೇಕು ಎಂದರು.

Contact Your\'s Advertisement; 9902492681

ಬ್ಯಾಂಕ್ ನಡೆಸುವದೊಂದೇ ಉದ್ಯೋಗವಾಗಬಾರದು. ಬ್ಯಾಂಕಿನಿಂದ ಉದ್ಯೋಗಗಳು ಸೃಷ್ಟಿಯಾಗಬೇಕು. ಅಂದಾಗ ಗ್ರಾಹಕರ ಜತೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಅಲ್ಲದೇ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿ ಬ್ಯಾಂಕ್ ಬಲವರ್ಧನೆಗೆ ಶ್ರಮವಹಿಸಿ, ಪಾರದರ್ಶಕ ಆಡಳಿತ ನೀಡಬೇಕೆಂದು ತಿಳಿಸಿದರು.

ನೂತನ ಅಧ್ಯಕ್ಷ ಸದಾನಂದ ಕುಂಬಾರ ಮಾತನಾಡಿ, ಆಡಳಿತ ಮಂಡಳಿಯ ಸದಸ್ಯರ ಸಹಕಾರದಿಂದ ಈ ಸ್ಥಾನ ಲಭಿಸಿದ್ದು, ಸಂಘದ ಅಧ್ಯಕ್ಷ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೆನೆ.ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಚುನಾವಣಾಧಿಕಾರಿ ಸಂಗೀತ, ಸಂಘದ ಉಪಾಧ್ಯಕ್ಷ ಲೋಹಿತ ಕಟ್ಟಿ, ಮಾಜಿ ಅಧ್ಯಕ್ಷ ಶರಣು ವಸ್ತ್ರದ, ನಿಂಗಪ್ಪ ಹುಳಗೋಳಕರ್,ಶಿವಾನಂದ ಪಾಟೀಲ, ಸುನಂದಾ ನಾಗಣ್ಣ ಪಾಟೀಲ, ನಾರಾಯಣ ರೆಡ್ಡಿ, ಜಗದೀಶ ಪಾಟೀಲ, ಶ್ರೀಧರ ಜೋಶಿ ಹಾಗೂ ಶರಣು ಜೋಗೂರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here