ಕಲಬುರಗಿ: ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಶಾಸಕಿ ಕನೀಝ್ ಫಾತೀಮಾ ಅವರು ಜಿಲಾನಾಬಾದ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ್ ಖರ್ಗೆ ಪರ ಮತಯಾಚಿಸಿದ್ದರು.
ಅವರು ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಕೋಮುವಾದಿ, ಜಾತಿವಾದಿ ಪಕ್ಷವನ್ನು ಕಿತ್ತೊ ಹಾಕಬೇಕೆಂದು ಮತದಾರರಿಗೆ ಕರೆ ನೀಡಿ, ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಅವರಿಂದ ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಆಯ್ಕೆ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ , ಕಾಂಗ್ರೆಸ್ ಯುವ ಮುಖಂಡ ಫರಾಜುಲ್ ಇಸ್ಲಾಂ, ಪಾಲಿಕೆ ಸದಸ್ಯ ಸಮದ್ ಅಹ್ಮದ್ ಸರಡಗಿ, ಫಿರದೋಸ್ ನಗರ ವೇಲಫರ್ ಸುಸೈಟಿಯ ಅಧ್ಯಕ್ಷ ಸಯದ್ ದಸ್ತೆಗೀರ, ಸಾಜಿದ್ ಅಲಿ ರಂಜೋಯಿ, ಮಕ್ಬುಲ್ ಅಹ್ಮದ್ ಸಗರಿ, ತೌಫೀಕ್ ದೇಸಾಯಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.