ಕಲಬುರಗಿ ; ನಗರದ ಟೌನ್ ಹಾಲ್ ಮುಂಭಾಗದಲ್ಲಿ ನವೆಂಬರ್ 10 ರಂದು ಬೆಳಿಗ್ಗೆ 9.ಕ್ಕೆ ಡಾ: ಜಗಜೀವನರಾಂ ಪುತ್ಥಳಿ ಆವರಣದಲ್ಲಿ ಮಾಜಿ ಮಂತ್ರಿಗಳು ಮತ್ತು ಮಾದಿಗ ಸಮಾಜದ ಹಿರಿಯ ಮುಖಂಡರಾದ ದಿ: ಜಿ. ರಾಮಕೃಷ್ಣ ರವರ 87ನೇ ಜನ್ಮದಿನ ಅಂಗವಾಗಿ ಮಾದಿಗ ಸಮಾಜದ ವತಿಯಿಂದ ವಿಜೃಂಭಣೆಯಿಂದ ಆಚರಣೆ ಹಾಗೂ ಅನ್ನ ಸಂತರ್ಪಣೆ ಮಾಡಲಾಗುವುದು.
ಈ ಕಾರ್ಯಕ್ರಮಕ್ಕೆ ಮಾದಿಗ ಸಮಾಜದ ಎಲ್ಲಾ ಸಂಘ/ಸಂಘಟನೆಗಳ ಪದಾಧಿಕಾರಿಗಳು, ಸಮಾಜದ ಹಿರಿಯರು ಯುವಕರು, ಮಹಿಳೆಯರು, ನಿವೃತ್ತಿ ಹೊಂದಿರುವ ನೌಕರಸ್ಥರು, ವಿದ್ಯಾರ್ಥಿಗಳು, ಹಾಗೂ ರಾಮಕೃಷ್ಣರವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾದಿಗ ಸಮಾಜದ ಯುವ ಹೋರಾಟಗಾರರಾದ ರಾಜು ಎಸ್. ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.