ಆಯುರ್ವೇದ ಬಹುತೇಕ ಎಲ್ಲಾ ಕಾಯಿಲೆಗಳನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ; ಬಸವರಾಜ ದೇಶಮುಖ

0
41

ಕಲಬುರಗಿ; ಆಯುರ್ವೇದ ಬಹುತೇಕ ಎಲ್ಲಾ ಕಾಯಿಲೆಗಳನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ. ಆಯುರ್ವೇದವನ್ನು ಪರ್ಯಾಯ ಔಷಧವಾಗಿ ಪ್ರಚಾರ ಮಾಡುವ ಅಗತ್ಯವಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಹೇಳಿದರು.

ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್ ಸ್ಪಾ ಸೆಂಟರ್‍ನಲ್ಲಿ ನಡೆದ ಒಂದು ದಿನದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಆಯುರ್ವೇದವನ್ನು ಅನಾದಿ ಕಾಲದಿಂದಲೂ ಜಗತ್ತಿಗೆ ನೀಡಿದ ಪ್ರಮುಖ ಕೊಡುಗೆಯಾಗಿದೆ. ಆಯುರ್ವೇದವು ಪರಿಣಾಮಕಾರಿ ಪರ್ಯಾಯ ಔಷಧವೆಂದು ಸಾಬೀತಾಗಿದೆ ಎಂದು ಒತ್ತಿ ಹೇಳಿದರು.

Contact Your\'s Advertisement; 9902492681

ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳದಂತಹ ರಾಜ್ಯದಲ್ಲಿ ಮೊದಲನೇಯ ಆದ್ಯತೆಯ ಔಷಧವೆಂದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವ ಆಯುರ್ವೇದವು, ದೇಶದ ಇತರ ಭಾಗಗಳಲ್ಲಿ ಪರ್ಯಾಯ ಔಷಧವಾಗಿ, ನಿಧಾನವಾಗಿಯಾದರೂ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಆಯುರ್ವೇದ ಥೆರಪಿ ಮತ್ತು ಮಾಡರ್ನ್ ಸ್ಪಾ ಸೆಂಟರ್ 13 ವರ್ಷಗಳ ಹಿಂದೆ ಕಲಬುರಗಿ ನಗರದಲ್ಲಿ ಮಹಾದಾಸೋಹಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಕಲಬುರಗಿ ಪ್ರದೇಶದ ಜನರಿಗೆ ಅತ್ಯಂತ ವಿಶ್ವಾಸಾರ್ಹ ಚಿಕಿತ್ಸೆಯನ್ನು ವಿಸ್ತರಿಸುವ ಏಕೈಕ ಉದ್ದೇಶದಿಂದ ಸ್ಥಾಪಿಸಿದರು. ಆಗ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಪೂಜ್ಯ ಡಾ. ಅಪ್ಪಾಜಿ ಅವರು ಕಲಬುರಗಿ ನಗರದಲ್ಲಿ ಇದೇ ರೀತಿಯ ಕೇಂದ್ರ ಆರಂಭಿಸುವ ಮುನ್ನ ಕೇರಳದ ಕೊಟ್ಟಕಲ್‍ನ ಆರ್ಯ ವೈದ್ಯಶಾಲೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಶ್ರೀ ದೇಶಮುಖ ಹೇಳಿದರು.

ಕೇರಳದ ಕೊಟ್ಟಕಲ್‍ನಲ್ಲಿರುವ ಪ್ರಸಿದ್ಧ ವೈದ್ಯರತ್ನ ಪಿ ಎಸ್ ವೇರಿಯರ್ ಅವರ ಆರ್ಯ ವೈದ್ಯ ಶಾಲೆಯಿಂದ ಇಬ್ಬರು ಆಯುರ್ವೇದ ತಜ್ಞವೈದ್ಯರಾದ ಡಾ ಆರ್ ದೀಪಕ್ ಮತ್ತು ಡಾ ಅನುಪ್ ರಾಜನ್ ಕೆ ಈ ಉಚಿತ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿದ್ದು, ಶಿಬಿರದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇವರು ನಾಲ್ಕು ವೈದ್ಯರು ಮತ್ತು 10 ಚಿಕಿತ್ಸಕರೊಂದಿಗೆ ಸೇರಿಕೊಂಡು ನರಗಳ ಅಸ್ವಸ್ಥತೆಗಳು, ಸಂಧಿವಾತ ಸೇರಿದಂತೆ ಮೂಳೆ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ಸೋರಿಯಾಸಿಸ್, ಚರ್ಮದ ಬಿಳಿ ತೇಪೆಗಳು, ಪೈಲ್ಸ್, ಫಿಸ್ಟುಲಾ ಮತ್ತು ಇತರ ಅಸ್ವಸ್ಥತೆ ಹಾಗೂ ವಿವಿಧ ಕಾಯಿಲೆಗಳಿಗೆ ಸಮಾಲೋಚನೆ ನಡೆಸಿ, ತಜ್ಞರ ಚಿಕಿತ್ಸೆಯನ್ನು ಈ ಶಿಬಿರದಲ್ಲಿ ಒದಗಿಸುತ್ತಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ನಿರಂಜನ್ ವಿ. ನಿಷ್ಠಿ ಅಲೋಪತಿ, ಹೋಮಿಯೋಪತಿ, ಆಯುರ್ವೇದ ಸೇರಿದಂತೆ ಔಷಧಗಳ ವಿವಿಧ ಶಾಖೆಗಳು ಪರಸ್ಪರ ಪೂರಕವಾಗಿದ್ದು, ಆಯುರ್ವೇದವು ವಿವಿಧ ಕಾಯಿಲೆಗಳನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ. ಯಾವುದೇ ಕಾಯಿಲೆಗಳಿಗೂ ಚಿಕಿತ್ಸೆ ಆಯುರ್ವೇದದಲ್ಲಿದೆ ಎಂದು ತಿಳಿಸಿದರು. ಎಲ್ಲಾ ರೋಗಿಗಳಿಗೆ ಕೈಗೆಟುಕುವ ಅಲೋಪತಿ ಚಿಕಿತ್ಸೆಯು ದುಬಾರಿಯಾಗಿದ್ದರೂ, ತುರ್ತು ಸಂದರ್ಭಗಳಲ್ಲಿ ಅಲೋಪತಿ ಚಿಕಿತ್ಸೆಯನ್ನು ಪಡೆಯುವುದನ್ನು ಬಿಟ್ಟು ಜನರಿಗೆ ಬೇರೆ ಪರ್ಯಾಯವಿಲ್ಲ, ಆದರೆ ಆಯುರ್ವೇದ ಸೇರಿದಂತೆ ಇತರ ರೀತಿಯ ಚಿಕಿತ್ಸೆಗಳು ಗಣನೀಯವಾಗಿ ಕಡಿಮೆ ವೆಚ್ಚದಲ್ಲಿರುತ್ತವೆ ಎಂದರು.

ಶ್ರೀ ಬಸವರಾಜ ದೇಶಮುಖ ಅವರು ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಸಿಬ್ಬಂದಿಗೆ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿದರು. ಆರೋಗ್ಯ ಕಾರ್ಡ್ ಹೊಂದಿರುವವರು, ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್ ಸ್ಪಾ ಸೆಂಟರ್‍ನಲ್ಲಿ ಎಲ್ಲಾ ಕಾಯಿಲೆಗಳ ಚಿಕಿತ್ಸೆಯಲ್ಲಿ ಶೇಕಡಾ 50% ರಷ್ಟು ರಿಯಾಯಿತಿಗೆ ಅರ್ಹರಾಗಿರುತ್ತಾರೆ. ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪೆÇ್ರ. ವಿ ಡಿ ಮೈತ್ರಿ ಮಾತನಾಡಿದರು.

ಅಪ್ಪಾ ಆಯುರ್ವೇದ ಕೇಂದ್ರದ ಮುಖ್ಯಸ್ಥ ಡಾ. ಅಲ್ಲಮಪ್ರಭು ಗುಡ್ಡಾ ಸ್ವಾಗತಿಸಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ ಸಂಪದ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಡಾ. ಮಾಳವಿಕಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here