ಡಿಸಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

0
21

ಕಲಬುರಗಿ: ಜಿಲ್ಲೆಯ ಕಮಲಾಪೂರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ನಡೆದಿದ್ದ ಗಲಾಟೆಯಲ್ಲಿ ಗಾಯ ಗೊಂಡು ಚಿಕಿತ್ಸೆ ಫಲಕಾರಿಯಾಗದೆ ಜಗದೇವಪ್ಪ ಮೃತಪಟ್ಟ ಕೊಲೆ ಪ್ರಕರಣದ ರೌಡಿಶೀಟರ್‍ಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ,ಮೃತನ ಕುಟುಂಬಕ್ಕೆ ನ್ಯಾಯ ವದಗಿಸಿಕೊಡುವಂತೆ ಒತ್ತಾಯಿಸಿ, ಆತನ ಶವ ವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಟ್ಟು ದಲಿತ ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಈ  ಸಂದರ್ಭದಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಜಿಲ್ಲಾಧ್ಯಕ್ಷ  ಮಂಜುನಾಥ್ ಬಂಧಾರಿ, ತಾಲೂಕ ಅಧ್ಯಕ್ಷ ರಾಜು ಲೇಂಗಟಿ, ಮೋಹನ್ ಚಿನ್ನ, ಗುರು ಮಾಳಗಿ, ಹಸನಪ್ಪ, ವಿಠಲ ಆರ್ ವಾಚನಾಳ, ಮಲ್ಲು ಬೇಡಸೂರ್ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here