ಪ್ರಿಯಾಂಕ್ ಖರ್ಗೆ ಜನ್ಮ ದಿನ; ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ನ.22 ರಂದು

0
25

ಕಲಬುರಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ 45ನೇ ಹುಟ್ಟು ಹಬ್ಬದ ಅಂಗವಾಗಿ ಇಲ್ಲಿನ ಮಹೇಂದ್ರ ಫೌಂಡೆಶನ್ ವತಿಯಿಂದ‌ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ ದೊಡ್ಡಮನಿ, ಕಾರ್ಯದರ್ಶಿ ಶರಣ ಬಸವ ಹೆಗ್ಗಡೆ ತಿಳಿಸಿದ್ದಾರೆ.

ನ. 22 ರಂದು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮವನ್ನು ಖ್ಯಾತ ಮೂಳೆ ತಜ್ಞ ಡಾ.‌ ಎಸ್.ಬಿ.‌ಕಾಮರೆಡ್ಡಿ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ನಿವೃತ್ತ ಪ್ರಾಚಾರ್ಯ ಅಂಬಣ್ಣ ಜೀವಣಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಎಂ.ಎಸ್., ಆನಂದರಾವ ಎಸ್.ಎನ್., ಯಶವಂತ ಡಿ.‌ ಶಿಂಧೆ, ಈಶ್ವರ ಹೊಸಮನಿ, ಮಹೇಶ ಕುಲಕರ್ಣಿ, ಡಾ. ಚಂದ್ರಶೇಖರ ದೊಡ್ಡಮನಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here