ರೋಗಿಗಳಿಗೆ ಶಾಲು ಹೊದಿಕೆ ವಿತರಣೆ

0
14

ಕಲಬುರಗಿ; ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂ ಚಾಯಿತಿರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 45ನೇ ಜನ್ಮ ದಿನದ ನಿಮಿತ್ಯ ನಗರದ ಸರಕಾರಿ ಆಸ್ಪತ್ರೆ ಯಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅರುಣ ಭರಣಿ ಅವರ ನೇತೃತ್ವದಲ್ಲಿ  ಹೇರಿಗೆಯಾದ ತಾಯಿಯಂದರಿಗೆ ಹಾಗೂ ಬಡ ರೋಗಿಗಳಿಗೆ ಶಾಲು ಹೊದಿಕೆ ವಿತರಿಸಲಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ  ರಾಜ್ಯ ಉಪಾಧ್ಯಕ್ಷ ಈರಣ್ಣ ಝಳಕಿ, ಮಹಾಸಭಾದ ಅಧ್ಯಕ್ಷ ಮಹಾದೇವ ಮೋಘ, ಉಪಾಧ್ಯಕ್ಷ ಚಂದ್ರಕಾಂತ ವಾಲಿ, ಮುಖಂಡರಾದ ಪೃಥ್ವಿರಾಜ ಮಾಲಿಪಾಟೀಲ,  ಪ್ರಭು ಶಿಲ್ಡ, ಮಹೇಶ ಮಂದಿನಕರ್, ಡಾ.ಜಗದೀಶ ಕಟ್ಟಿ, ಅಮರ ಎಕಲೂರೆ, ಭಿಮು ಅಟ್ಟೂರ, ಗೌತಮ ಹೋಸಮನಿ, ಸುನೀಲ್ ಹರಿಜನ್, ರೋಹಿತ ಬಬಲಾದ, ಸಚಿನ ಭರಣಿ   ಸೇರಿದಂತೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here