ವಿಪಕ್ಷ ನಾಯಕ ಆರ್. ಅಶೋಕಗೆ ಸಾಂಪ್ರದಾಯಿಕ ಸ್ವಾಗತ

0
77

ಕಲಬುರಗಿ: ಬರದಿಂದಾಗಿ ತತ್ತರಿಸಿದ ರೈತರ ಸಮಸ್ಯೆ ಆಲಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಾಜಿ ಶಾಸಕರಾದ ಸುಭಾಷ ಗುತ್ತೇದಾರವರ ಕೋರಿಕೆಯಂತೆ ರಾಜ್ಯದಲ್ಲೇ ಮೊದಲು ಭೇಟಿ ಕಡಗಂಚಿ ಗ್ರಾಮಕ್ಕೆ ನೀಡಿ ಸಮಸ್ಯೆ ಆಲಿಸಿದ್ದು ರೈತ ಸಮುದಾಯಕ್ಕೆ ಕೊಂಚ ನೆಮ್ಮದಿ ತಂದಿದೆ. ನಾಯಕರು ಬೇಡಿಕೆ ಈಡೇರಿಕೆಗೆ ಒತ್ತಡ ಹೇರಬೇಕು ಎಂದು ಕೆಕೆಆರ್‍ಟಿಸಿ ಮಾಜಿ ನಿರ್ದೇಶಕ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಜಿ. ತಡಕಲ್ ಮನವಿ ಮಾಡಿದರು.

ತಾಲೂಕಿನ ಕqಗÀಂಚಿ ಗ್ರಾಮಕ್ಕೆ ಮಂಗಳವಾರ ರಾಜ್ಯದ ವಿರೋಧ ಪಕ್ಷದ ನೂತನ ನಾಯಕ ಆರ್. ಅಶೋಕ ಅವರು ಬರ ಅಧ್ಯಯನಕ್ಕೆ ಆಗಮಿಸಿದ್ದ ವೇಳೆ ಅವರನ್ನು ರೈತರ ಪರ ಸ್ವಾಗತಿಸಿಕೊಂಡು ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು.

Contact Your\'s Advertisement; 9902492681

ತಾಲ್ಲೂಕಿನ ರೈತರು ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದು, ಅನೇಕ ಗ್ರಾಮಗಳಲ್ಲಿ ಕುಡಿಯಲು ನೀರು ಸಿಗದೆ ಜನರು ಪರದಾಡುತಿದ್ದು ಜಾನುವಾರುಗಳು ನೀರು, ಆಹಾರ ಸಿಗದೆ ಸಾವನ್ನಪ್ಪುತಿದ್ದು ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಶಾಸಕರು ರೈತರ ಕೈಗೆ ಸಿಗುತ್ತಿಲ್ಲ, ಆದರೆ ಸದಾ ಜನಪರ ಕಾಳಜಿ ಹೊಂದಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರವರು ನೇತೃತ್ವದಲ್ಲಿ ವಿಪಕ್ಷ ನಾಯಕರಿಂದ ಕಡಗಂಚಿಯಿಂದಲೇ ಮೊದಲು ಬರ ಅಧ್ಯಯನಕ್ಕೆ ಚಾಲನೆ ನೀಡಿದ್ದು ಶೀಘ್ರವೇ ಬರ ಪರಿಹಾರ ಮತ್ತು ಬೆಳೆ ವಿಮೆ ರೈತರಿಗೆ ದೊರೆಯುವಂತಾಗಲು ವಿಪಕ್ಷ ನಾಯಕರು ಆಗಮಿಸಿದ್ದು ಇಲ್ಲಿಯ ಸರ್ವರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ಕಡಗಂಚಿಗೆ ಬರುತ್ತಿದ್ದಂತೆ ಗ್ರಾಮದ ದ್ವಾರಬಾಗಿಲಿನಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಕೆಕೆಆರ್‍ಟಿಸಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ ಅವರು ಸನ್ಮಾನಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತಿಮುಡ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕ ಸುಭಾμï.ಆರ್ ಗುತ್ತೇದಾರ, ದತ್ತಾತ್ರೇಯ ಪಾಟೀಲ್ ರೆವೂರ, ಅಮರನಾಥ್ ಪಾಟೀಲ್, ಮುಖಂಡರಾದ ಹμರ್Áನಂದ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ರದ್ದೇವಾಡಗಿ, ಸೇರಿದಂತೆ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ರೈತರು, ಮುಖಂಡರು, ರೈತರು ಮತ್ತಿತರರು ಇದ್ದರು.

ಆರ್.ಅಶೋಕ ಅವರ ಮುಂದೆ ಕಡಗಂಚಿ ಸುತ್ತಮುತ್ತಲಿನ ರೈತರು ಬೆಳೆಗಳ ಕುರಿತು ಅಳಲು ತೊಡಿಕೊಂಡರು. ಸುಂಟನೂರ, ತೆಲ್ಲೂರ ಮತ್ತಿತರರ ಕಡೆಯ ರೈತರು ಕೃಷಿ ಸಂಬಂಧಿತ ಸಮಸ್ಯೆ ಕುರಿತು ಗಮನಕ್ಕೆ ತಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here