ಶಾಸಕ ಆರ್.ವಿ ನಾಯಕ ಜನುಮ ದಿನ ವಿವಿಧೆಡೆ ಪೂಜಾ ಕಾರ್ಯಕ್ರಮ

0
15

ಸುರಪುರ: ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ 66ನೇ ಜನುಮ ದಿನಾಚರಣೆ ಅಂಗವಾಗಿ ಶಾಸಕರ ಅಭಿಮಾನಿಗಳಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕರಿಗೆ ಶುಭ ಹಾರೈಸಿದ್ದಾರೆ ಹಾಗೂ ನಾಡಿಗೆ ನಾಡಿನ ರೈತರಿಗೆ ನಾಡ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಹಯ್ಯಾಳ ಲಿಂಗೇಶ್ವರ ದೇವಸ್ಥಾನದಲ್ಲಿ,ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಸಕ್ರೆಪ್ಪ ತಾತಾ,ಮಾರ್ಥಂಡಪ್ಪ ಮುತ್ಯಾನವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಬೇಟೆಗಾರ,ದೇವೇಂದ್ರಪ್ಪ ಚಿಕ್ಕನಳ್ಳಿ,ಮಲ್ಲಯ್ಯ ದೀವಳಗುಡ್ಡ,ಬಸವರಾಜ ಕೋತಿಗುಡ್ಡ,ತಿಮ್ಮಯ್ಯ ಕನ್ನಳ್ಳಿ,ಈಶ್ವರ ಕಂಬಾರ,ಭೀಮಣ್ಣ,ನಬಿಲಾಲ್,ಮೌನೇಶ,ಅಂಬ್ಲಯ್ಯ ಬೇಟೆಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಗರದ ನಾಗಲಾಪುರ ಶ್ರೀ ವೀರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ,ಮಲ್ಲಣ್ಣ ಸಾಹು ಮುಧೋಳ,ರಾಜಾ ಕುಮಾರ ನಾಯಕ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ನಾಯಕ,ಸಂಗನಗೌಡ ಬೋನಾಳ,ಮಲ್ಲಣ್ಣ ಹುಬ್ಬಳ್ಳಿ,ಸೂಗರಾಜ ಪಾಣಿ,ಸಿದ್ದಪ್ಪ ಗುಡ್ಡಕಾಯಿ,ಭೀಮರಾಯ ಕುಂಬಾರ,ಬಸವರಾಜ ದಿವಳಗುಡ್ಡ,ನಾಗಭೂಷಣ ಯಾಳಗಿ ಸೇರಿದಂತೆ ಅನೇಕರಿದ್ದರು.

ನಗರದ ಶ್ರೀ ಕೃಷ್ಣ ದ್ವೈಪಾಯನ ತೀರ್ಥರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜಾ ವೇಣುಗೋಪಾಲ ನಾಯಕ,ರಾಜಾ ಕುಮಾರ ನಾಯಕ,ರಾಜಾ ವಿಜಯ ಕುಮಾರ ನಾಯಕ,ರಾಜಾ ಸುಶಾಂತ ನಾಯಕ,ರಾಧಾಕೃಷ್ಣ ಜೋಷಿ,ರಮೇಶ ಕುಲಕರ್ಣಿ,ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here