ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಜನ್ಮದಿನ; ಅನ್ನದಾಸೋಹ

0
16

ಸುರಪುರ: ನಗರದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು.

ರಾಜ್ಯದಲ್ಲಿ ಬರಗಾಲವಿದ್ದು ರೈತರು ಸಂಕಷ್ಟದಲ್ಲಿರುವಾಗ ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಜನುಮ ದಿನವನ್ನು ಅದ್ಧೂರಿಯಾಗಿ ಆಚರಿಸದೆ ರೈತರಿಗಾಗಿ ಪ್ರಾರ್ಥಿಸುವಂತೆ ತಿಳಿಸಿದ್ದರಿಂದ ಶಾಸಕರ ಅಭಿಮಾನಿ ಬಳಗ ದಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಸಿ ಶಾಸಕರಿಗೆ ಜನುಮ ದಿನಕ್ಕೆ ಶುಭ ಹಾರೈಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ವಾಸುದೇವ ನಾಯಕ,ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ವಿಜಯಕುಮಾರ್ ನಾಯಕ್, ರಾಜಾ ಸುಶಾಂತ ನಾಯಕ, ವೆಂಕಟೇಶ ಹೊಸಮನಿ ರಮೇಶ್ ದೊರೆ ಆಲ್ದಾಳ,ಮಹೇಶ ಯಾದವ್,ಸೂಗುರೇಶ ವಾರದ, ವೆಂಕಟೇಶ ಬೇಟೆಗಾರ ಗೋಪಾಲ ದೊರೆ ಮಾಳಪ್ಪ ಕಿರದಳ್ಳಿ, ಧರ್ಮರಾಜ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿ ಸಾವಿರಾರು ಜನರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here