ಭಾರತದ ಸಂವಿಧಾನ ಜಗತ್ತಿಗೆ ವಿಶ್ವಕೋಶವಿದ್ದಂತೆ; ವಿದ್ಯಾರ್ಥಿಗಳಿಗೆ ಉಚಿತ ಸಂವಿಧಾನ ಪುಸ್ತಕ ವಿತರಣೆ

0
38

ಕಲಬುರಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ವಿಶ್ವದಾದ್ಯಂತ ಸಾವಿರಾರು ಪಿ.ಎಚ್‍ಡಿ ಗ್ರಂಥಗಳು, ಲೇಖನಗಳು, ಚರ್ಚಾಗೋಷ್ಠಿಗಳು ಜರುಗುತ್ತಿವೆ. ಬೇರೆ ದೇಶಗಳು ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಭಾರತದ ಸಂವಿಧಾನವನ್ನು ಆಧಾರವನ್ನಾಗಿ ಅನುಸರಿಸುತ್ತಿರುವುದು ಜಗ್ತತಿಗೆ ನಮ್ಮ ದೇಶದ ಸಂವಿಧಾನದ ತತ್ವಗಳ ಅವಶ್ಯಕತೆಯನ್ನು ತೋರಿಸುತ್ತದೆ. ವಿಶ್ವದ ಶ್ರೇಷ್ಠ ನಮ್ಮ ಸಂವಿಧಾನÀದ ಆಶಯಕ್ಕೆ ದಕ್ಕೆ ಬಾರದಂತೆ, ಅದರ ತತ್ವಗಳನ್ನು ಪ್ರತಿಯೊಬ್ಬರು ಅನುಸರಿಸಿ ಡಾ.ಬಾಬಾಸಾಹೇಬ್‍ರ ಕಲ್ಪನೆಯ ಭವ್ಯ ಭಾರತ ನಿರ್ಮಾಣಕ್ಕೆ ಸಾಮೂಹಿಕವಾಗಿ ಪ್ರಯತ್ನಿಸೋಣ ಎಂದು ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ನಗರದ ಸುಪರ್ ಮಾರ್ಕೆಟ್ ಪ್ರದೇಶದÀಲ್ಲಿರುವ ‘ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯ’ದಲ್ಲಿ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ವತಿಯಿಂದ ಏರ್ಪಡಿಸಲಾಗಿದ್ದ ‘ಭಾರತದ ಸಂವಿಧಾನ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ದೇಶದ ಸಂವಿಧಾನವು ಭಾರತದ ಸಮಗ್ರ ಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಜಾತ್ಯಾತೀತತೆ, ಸಮಾನತೆ, ಭಾತೃತ್ವ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ರಾಷ್ಟ್ರೀಯತೆಯಂತಹ ಮುಂತಾದ ಮೌಲ್ಯಗಳಿಂದ ಕಲ್ಯಾಣ ರಾಷ್ಟ್ರ ನಿರ್ಮಾಣದ ಗುರಿ ಹೊಂದಿದೆ. ಸಂವಿಧಾನ ಭಾರತದ ಹೆಮ್ಮೆ, ಗೌರವದ ಪ್ರತೀಕವಾಗಿದ್ದು, ರಾಷ್ಟ್ರಗ್ರಂಥವಾಗಿದೆ. ದೇಶದ ರಕ್ಷಾ ಕವಚವಾಗಿ ಕಾರ್ಯ ಮಾಡುತ್ತಿದ್ದು, ಅದರ ಆಶಯಗಳ ಪಾಲನೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮತ್ತು ವಿದ್ಯಾರ್ಥಿನಿಯರಾದ ಅಂಕಿತಾ, ಭಾಗ್ಯಶ್ರೀ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಗೀತೆಗಳನ್ನು ಹಾಡಿದರು.

ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು. ವಿದ್ಯಾರ್ಥಿಗಳಿಗೆ ಸಂವಿಧಾನದ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಮುಖಂಡ ರಜಾಕ ಪಟೇಲ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಬ್ಯಾಂಕ್ ಅಧಿಕಾರಿ ಅಶೋಕ ಕಾಳೆ, ಶಾಲೆಯ ಮುಖ್ಯ ಶಿಕ್ಷಕಿ ನಸೀಮುನ್ನೀಸ್ ಬೇಗಂ, ಶಿಕ್ಷಕರಾದ ಶ್ರೀದೇವಿ, ಸುವರ್ಣಾ, ವಸತಿ ನಿಲಯದ ವಾರ್ಡನ್ ಬಸಮ್ಮ ಪಾಲ್ಕಿ ಹಾಗೂ ಅನೇಕ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here