ಪ್ರಶಸ್ತಿ ಪುರಸ್ಕೃತ ಸಿ.ಬಿ ರಾಜೇಶ್ವರಿ ಶಿಕ್ಷಕಿಗೆ ಸನ್ಮಾನ

0
9

ಸುರಪುರ: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಬೀದರ್ ನಗರದ ಡಾ: ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರದ ಹಿರಿಯ ಶಿಕ್ಷಕಿ ಸಿ ಬಿ ರಾಜೇಶ್ವರಿ ಅವರಿಗೆ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಅವರ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ನೆರವೇರಿಸಲಾಯಿತು.

ನಗರದ ಟೈಲರ್ ಮಂಜಿಲ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸಿ.ಬಿ ರಾಜೇಶ್ವರಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕಿಯ ಸಾಧನೆ ಕುರಿತು ಹಳೆಯ ವಿದ್ಯಾರ್ಥಿ ವಿರೂಪಾಕ್ಷ ಹಿರೇಮಠ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಕಮಲೇಶ್ ಜೈನ್, ಜಕ್ಕಪ್ಪ ಕಟ್ಟಿಮನಿ ,ಸುಹಾಸ್ ದಾದಾ, ಗೋವಿಂದ ಮಾಳದಕರ, ರಂಗನಾಥ ಬಿರಾದರ್, ರಂಗನಾಥ ಹೊಸಮನಿ, ಸೋಮನಾಥ ಎಚ್ ಡೊಣ್ಣೆಗೇರ, ಆನಂದ ಜೈನ್ ,ಮಹೇಂದ್ರ ಜೈನ್, ಅಮಿತ್ ಗುರಿಕಾರ್, ಇರ್ಫಾನ್, ದುರ್ಗಾ ವನಕೇರಿ, ಶರಣು ಶಿರವಾಳ, ದೇವಡಿ,ಖಾಜಾ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here