ಕಲಬುರಗಿ: ನಗರದ ವಾರ್ಡ ನಂ 52.ರ ಸಂತೋಷ ಕಾಲನಿಯ ಹನುಮಾನ ದೇವಸ್ಥಾನದ ಆವರಣದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ಅವರ ನೇತೃತ್ವದಲ್ಲಿ ಅನ್ನ ದಾಸೋಹ ಮಾಡಲಾಯಿತು.
ಅರ್ಚಕ ಸುಗಯ್ಯ ಮುತ್ಯಾ, ಕಾಂಗ್ರೆಸ್ ಮುಖಂಡ ಅಭಿಷೇಕ ಎ. ಪಾಟೀಲ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಭೀಮಾಶಂಕರ ವಿಭೂತಿ, ಕೃಷ್ಣಾ ಸಿಂಧ್ಯೆ, ಡಾ.ಸಾಗರ ಪಾಟೀಲ, ಪರಶುರಾಮ ನಾಟೇಕಾರ, ವೇಂಕಟ ರೆಡ್ಡಿ, ಸುಶೀಲ ಗಾಯಕವಾಡ, ಗೋವಿಂದ, ಸಂತೋಷ ಪಾಟೀಲ, ಸಂಗಯ್ಯಾ ಸ್ವಾಮಿ, ಧನ್ನರಾಜ ಪೂಜಾರಿ, ಅಶೋಕ, ವಿದ್ಯಾಸಾಗರ ಸೇರಿದಂತೆ ಇತರರು ಇದ್ದರು.