ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಮುಖಂಡ ವೆಂಕಟೇಶ ಭಜಂತ್ರಿ ನೇತೃತ್ವದಲ್ಲಿ ಅನ್ನ ದಾಸೋಹ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡ ಅಭಿಷೇಕ ಎ. ಪಾಟೀಲ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಈರಣ್ಣ ಝಳಕಿ, ಶಿವಾನಂದ ಹೋನಗುಂಟಿ, ಸಚಿನ್ ಶಿರವಾಳ, ರಾಜವಿ ಜಾನೆ, ವಾಣಿಶ್ರೀ ಸಗರಕರ್, ಪರಶುರಾಮ ನಾಟೇಕಾರ, ಮಂಜುನಾಥ ಬಿರಾದಾರ, ಚನ್ನಬಸಪ್ಪ, ರಜಾಕ್ ಚೌದ್ರಿ, ಸೈರಾ ಭಾನು, ಶೇಖ ಸಮರಿನ್,ಇತರರು ಇದ್ದರು.