ವಕೀಲ್ ಹತ್ಯೆ ಖಂಡಿಸಿ ಕಲಬುರಗಿ ನ್ಯಾಯವಾದಿಗಳಿಂದ ಪ್ರತಿಭಟನೆ

0
85

ಕಲಬುರಗಿ: ವಕೀಲ್ ಈರಣ್ಣಗೌಡ ಹತ್ಯೆ ಘಟನೆ ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧನಕ್ಕೆ ಒತ್ತಾಯಿಸಿ ಜಿಲ್ಲಾ ನ್ಯಾಯವಾದಿಗಳ ಸಂಘ ಹೈಕೋರ್ಟ್ ಯುನಿಟ್ ವತಿಯಿಂದ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ತೀಮ್ಮಾಪುರಿ ಸರ್ಕಲ್ ಹತ್ತಿರ ಬೃಹತ್ ಮಾನವ ಸರ್ಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ನಗರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಂಘದ ಅಧ್ಯಕ್ಷ ಗುಪ್ತಲಿಂಗ್ ಎಸ್ ಪಾಟೀಲ್ ಮಾತನಾಡಿದ ಅವರು ಸಮವಸ್ತ್ರದಲ್ಲಿ ನ್ಯಾಯಲಯಕ್ಕೆ ತೆರಳುವ ವೇಳೆ ದುಶ್ಕರ್ಮಿಗಳು ಹಾಡುಹಲೇ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಸರಕಾರ ವಕೀಲರಿಗೆ ಸಂರಕ್ಷಣೆ ನೀಡುವುದರಲ್ಲಿ ವಿಫಲವಾಗಿದೆ ಎಂದು ಕಿ
ಕೀಡಿಕಾರಿದ್ದರು.

ತಕ್ಷಣ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಧರ್ಮರಾಜ್ ಎಸ್ ಜೈಪುರ್, ಮಹಿಳಾ ಉಪಾಧ್ಯಕ್ಷ ಜಯಶೀಲ ಜಿ ಬಿ, ಶೀವರಾಜ್ ಸಿ ಪಾಟೀಲ್, ಕಾರ್ಯದರ್ಶಿ ಬಿ ಎಸ್ ನಾಸಿ, ಎಸ್.ಕೆ ಚಿಕ್ಕಳಿ, ಬಿ ಆರ್ ಪಾಟೀಲ್, ವಿನೋದ್ ಕುಮಾರ್ ಜನವರಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here