ವಾಡಿ: ಪಟ್ಟಣದ ಜಾಂಬವೀರ ಕಾಲೋನಿಯ ನಿವಾಸಿ ಜಾಂಬವೀರ ಸಮಾಜದ ಉಪಾಧ್ಯಕ್ಷರು, ಹಾಗೂ ಆದಿ ಜಾಂಬವ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಪರಮೇಶ್ವರ ಸಿ ಕೆಲ್ಲೂರ ( 35 ) ಅನಾರೋಗ್ಯದ ನಿಮಿತ್ತ ಇಂದು ಕಲಬುರಗಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ನಾಳೆ ಡಿ.10 (ರವಿವಾರ) ಬೆಳಿಗ್ಗೆ 11-30ಗಂಟೆಗೆ ಜಾಂಬವೀರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪರಮೇಶ್ವರ ಅಗಲಿಕೆಗೆ ಆದಿ ಜಾಂಬವ ಯುವಕ ಸಂಘ ಹಾಗೂ ಮಾದಿಗ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.