ಕವನ ಕಸೂತಿ ಕೃತಿ ಬಿಡುಗಡೆ

0
22

ಕಲಬುರಗಿ: ಒಂದು ಕಾವ್ಯವನ್ನು ಕಟ್ಟು ವಾಗ ಕೇವಲ ಕಲ್ಪನೆಯಲ್ಲಿ ಮೂಡಿ ಬರುವ ಪದ ಪುಂಜಗಳಿದ್ದರೆ ಸಾಲದು ಅದರೊಂದಿಗೆ ಭಾಷೆ, ಚಂದಸು, ವಿಚಾರಗಳು, ಪ್ರಾಸಗಳು ಸೇರಿ ವಿಷಯದ ಮೇಲೆ ರಚನೆಗೊಳ್ಳುವ ರೀತಿಯೇ ಕಾವ್ಯವಾಗಿ ಹೊರಹೊಮ್ಮುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಜೀಂ ಪ್ರೇಮಜಿ ಶಾಲೆ ಕಲಬುರಗಿಯವರು ಹಮ್ಮಿಕೊಂಡ ಕವನ ಕಸೂತಿ ಕೃತಿ ಬಿಡುಗಡೆಯಲ್ಲಿ ಕೃತಿಯ ಕುರಿತು ಸಿ.ಎಸ್.ಮಾಲಿಪಾಟೀಲ ಕನ್ನಡ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವನ ಕಸೂತಿ ಸಂಕಲನದ ಕವಿತ್ರಿ ಎಂಟನೆಯ ತರಗತಿಯಲ್ಲಿ ಓದುತ್ತಿರುವ ಕು.ಅದ್ವಿಕಾ ಕಾಡದೇವರ ಮಠ ವಿರಚಿತ ಸಂಕಲನವು ಮಕ್ಕಳ ಕವನ ಸಂಕಲನವಾಗಿದೆ. ಅವಳಲ್ಲಿ ಅಡಗಿರುವ ವಿವೇಚನಗಳೆ ಕವನ ಕಸೂತಿಯಾಗಿ ಹೊರಹೊಮ್ಮಿದ ಇದೊಂದು ಉತ್ತಮ ಕೃತಿ ಎಂದರು.
ಸಾಹಿತಿ ಎ. ಕೆ.ರಾಮೇಶ್ವರ ಅವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಕು.ಅದ್ವಿಕಾಳ ಭಾವನೆಗಳು ಹೊರಹೊಮ್ಮಿ ಕವನ ಕಸೂತಿಯಾಗಲು ಅವಳ ಗುರುಗಳಾದ ರಮೇಶ ರಾಠೋಡ ಅವರ ಪಾತ್ರವಿದೆ ಎಂದರು.

Contact Your\'s Advertisement; 9902492681

ಕವನಗಳು ರಚಿಸುವಾಗ ಉತ್ತಮ ಜ್ಞಾನ ಹೊಂದಿರಬೇಕು ಅರಿತುಕೊಳ್ಳುವ ಸಾಮಥ್ರ್ಯ ಹೊಂದಿರಬೇಕಾಗುತ್ತದೆ. ಆಜ್ಞಾನ ಅವಳಲ್ಲಿದೆ ಎಂದರು. ಕು.ಅದ್ವಿಕಾಳ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಕ್ರೆಪ್ಪಗೌಡ ಬಿರಾದಾರ ಮಾತನಾಡುತ್ತ ಆಟ ಆಡುವ ವಯಸ್ಸಿನಲ್ಲಿ ಮಕ್ಕಳು ಓದುವಂತಹ ಒಂದು ಉತ್ತಮ ಕವನ ಸಂಕಲನ ತಂದಿರೋದು ನನಗೆ ಬಹಳ ಖುಷಿ ತಂದಿರುವ ವಿಚಾರವಾಗಿದೆ ಎಂದರು.

ಈ ಕೃತಿಯ ಬಿಡುಗಡೆಯ ಕುರಿತು ಅಜೀಂ ಪ್ರೇಮಜಿ ಫೌಂಡೇಶ ಷನ್‍ದ ರಾಜ್ಯ ಮುಖ್ಯಸ್ಥರಾದ ರುದ್ರೇಶ.ಎಸ್. ಮಾತನಾಡಿ ಮಕ್ಕಳಿಗೆ ಸೂಪ್ತವಾದ ಜ್ಞಾನವನ್ನು ಹೊರ ಹಾಕಿ ಅದಕ್ಕೆ ಸೂಕ್ತವಾದ ವೇದಿಕೆಯನ್ನು ನೀಡಿದರೆ ಅವರ ಸೃಜನಾತ್ಮಕತೆಯನ್ನು ಹೊರಗೆ ಹಾಕಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಾಜಶ್ರೀ ನಾಯಕ ತರಗತಿಯ ಕಲಿಕಾ ಫಲಗಳನ್ನು ಶಿಕ್ಷಕರು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ಕೊಟ್ಟರೆ ಸಾಕು ಮಗುವಿನಲ್ಲಿರುವ ಅಭಿಪ್ರಾಯಗಳು ಕೃತಿಯಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿಗಳಾದ ಡಾ.ಕೆ.ಎಸ್.ಬಂಧು, ಪ್ರಕಾಶ ರಾಠೋಡ, ಸಂತೋಷ ಮಟ್ಟಿ, ಶಾಂತಾ ಪಸ್ತಾಪೂರ, ಶಿಕ್ಷಕ ರಮೇಶ ರಾಠೋಡ, ಅದ್ವಿಕಾಳ ಅಜ್ಜ, ರೇವಯ್ಯ ಅಜ್ಜಿ, ಅನ್ನಪೂರ್ಣ ಕುರ್ತಿಕೋಟಿ, ತಂದೆ ಮಹಾಂತೇಶ ತಾಯಿ ಉಮಾ ಅವರ ಬಂಧು ಬಳಗ ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ಮತ್ತು ಶ್ವೇತಾರವರು ನಿರೂ ಪಿಸಿದರು.ಶಿವಶರಣಪ್ಪರವ ರು ಸ್ವಾಗತಿಸಿದರು ಹಾಗೂ ಯಕ್ಷಿತರವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here