ಸಂಸದ ಭವನದ ಮೇಲಿನ ದಾಳಿ ಬಗ್ಗೆ ಆಪಾದನೆ ಮಾಡುತ್ತಿಲ್ಲ ಪ್ರಶ್ನೆ ಕೇಳುತ್ತಿದ್ದೇವೆ: ಸಚಿವ ಪ್ರಿಯಾಂಕ್ ಖರ್ಗೆ

0
43

ಕಲಬುರಗಿ: ಸಂಸದ ಪ್ರತಾಪ್ ಸಿಮಹ ಅವರಿಂದ ದೇಶ ತಲೆತಗ್ಗಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಂಸದ ಭವನದಲ್ಲಿ ಹೊಗೆ ಬಾಂಬ್ ದಾಳಿಯಾಗಿದರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಜವಾಬ್ದಾರಿಹೊಂದಿರುವ ಅಜಿತ್ ದೊಗಲ್ ಏಕೆ ಮಾತಾಡುತ್ತಿಲ್ಲ. ದಾಳಿಕೋರರಿಗೆ ಪಾಸ್ ವಿತರಣೆ ವಿಚಾರ ಮುಚ್ಚಿಹಾಕು ಬಿಜೆಪಿ ಪ್ರಯತ್ನ ಮಾಡುತ್ತಿದೆ.

Contact Your\'s Advertisement; 9902492681

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ ಅವರಿಗೆ ಮಾಧ್ಯಮಗಳ ಮುಂದೆ ಬಂದು ಮಾತನಾಡುವವರು ಈಗೇಕೆ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿಲ್ಲ ಸವಾಲ್ ಹಾಕಿದರು.

50 ವರ್ಷಗಳ ನಂತರ ದೇಶದಲ್ಲಿ 56 ಇಂಚ್ನ ಸರಕಾರ ಎಂದು ಬುರಡೆ ಬಿಡುವ ಬಿಜೆಪಿ ನಾಯಕರಿಗೆ ಸದನದಲ್ಲಿ ಹೊಗೆ ಬಾಂಬ್ ದಾಳಿ ಏಕಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ಆಗುತ್ತಿಲ್ಲ. ವಿರೋಧ ಪಕ್ಷದವರು ಪ್ರಶ್ನೆ ಕೇಳಿದರೇ ಅಪಾದನೆ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಹಾಗಾದರೇ ಈ ಸರಕಾರಕ್ಕೆ ಪ್ರಶ್ನೆ ಕೇಳುವುದು ತಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡು ವಿಚಾರವಾಗಿ ಸಿಟಿ ರವಿ ಅವರು ಪಕ್ಷದಲ್ಲಿ ಎನಿದಾರೆ ಎಂಬುದು ಗೊತ್ತಾಗಲಿ ಪಕ್ಷದಲ್ಲಿ ಸ್ಥಾನ ಸಿಕ್ಕಮೇಲೆ ಮಾತಾಡಲಿ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here