ಮತ್ತಿಮಡು ರಾಜ್ಯ ಕಾರ್ಯದರ್ಶಿ: ಪಕ್ಷ ಸಂಘಟನೆಗೆ ಬಲ

0
25

ಕಲಬುರಗಿ: ಶಾಸಕ ಬಸವರಾಜ ಮತ್ತಿಮಡು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ವಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಬಲವರ್ಧನೆಯಾಗಲಿದೆ ಎಂದು ಮುಖಂಡ ಆನಂದ ಕಣಸೂರ ತಿಳಿಸಿದ್ದಾರೆ.

ಸ್ನೇಹ ಜೀವಿ, ಸಂಘಟನಾ ಚತುರ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಶಾಸಕ ಮತ್ತಿಮಡು ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾಗಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ, ಗೋವಾ, ತೆಲಂಗಾಣ ಚುನಾವಣೆಯಲ್ಲಿ ವಿವಿಧ ಮತಕ್ಷೇತ್ರದ ಪ್ರಭಾರಿಯಾಗಿ ಯಶಸ್ವಿ ಕಾರ್ಯನಿರ್ವಹಿಸಿದ್ದಾರೆ.

Contact Your\'s Advertisement; 9902492681

ಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here