ಕ್ರೀಡಾಕೂಟದ ಅಂಗವಾಗಿ ಮೂರು ದಿನ ಅಲಭ್ಯ ಜನರು ಸಹಕರಿಸಿ-ಕೆ.ವಿಜಯಕುಮಾರ

0
15

ಸುರಪುರ: ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಕಂದಾಯ ನೌಕರರ ಕ್ರೀಡಾಕೂಟ ಇರುವ ಕಾರಣ ನಾನು ಸೇರಿದಂತೆ ಎಲ್ಲಾ ಕಂದಾಯ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕಾರಣ ಕಚೇರಿಯಲ್ಲಿ ಅಲಭ್ಯರಾಗಿರುತ್ತೇವೆ ಸಾರ್ವಜನಿಕರು ಸಹಕರಿಸಬೇಕು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ಜನರಲ್ಲಿ ವಿನಂತಿಸಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ವರ್ಷವಿಡೀ ಕೆಲಸ ಮಾಡುವ ಕಂದಾಯ ನೌಕರರಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಕ್ರಿಡಾಕೂಟ ನಡೆಯಲಿದೆ,ಆದ್ದರಿಂದ ಜನೆವರಿ 6,7 ಮತ್ತು 8 ರಂದು ಕಚೇರಿಯಲ್ಲಿ ಲಭ್ಯವಿರದ ಕಾರಣ ಸಾರ್ವಜನಿಕರು ಅರ್ಜೆಂಟಾಗಿರುವ ಏನಾದರು ವಿಷಯವಿದ್ದಲ್ಲಿ ಅಥವಾ ಮನವಿ ಸಲ್ಲಿಸುವುದಾದಲ್ಲಿ ಕಚೇರಿಯ ಆವಕದಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ.ಆದ್ದರಿಂದ ಸಾರ್ವಜನಿಕರು ಸಹಕರಿಸಲು ವಿನಂತಿಸುವುದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here