ರಾಮ ಮಂದಿರ ಉದ್ಘಾಟನೆಯಂದು ರಜೆ ನೀಡಲು ಮನವಿ

0
14

ಕಲಬುರಗಿ: ಮರ್ಯಾದೆ ಪುರುಷೋತ್ತಮ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಜ.22 ರಂದು ಅಯೋದ್ಯೆಯಲ್ಲಿ ನಡೆಯಲಿದ್ದು ಅಂದು ಐತಿಹಾಸಿಕ ನೆನಪಿಗಾಗಿ ಕೇಂದ್ರ ಸರಕಾರವು ರಜೆ ಘೋಷಿಸಬೇಕೆಂದು ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ರವೀಂದ್ರ ಕುಲಕರ್ಣಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀರಾಮ ಅವರು ದೇಶವಲ್ಲ ಇಡಿ ಜಗತ್ತಿನ ಕುಲಕೋಟಿಗೆ ಆರ್ದಶರಾಗಿದ್ದಾರೆ. ಇಂತಹವರ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠಾನ ನಡೆಯುತ್ತಿರುವುದು ಹೆಮ್ಮೇಯ ವಿಷಯ ಹಾಗೂ ಗೌರವ ಸಂಕೇತವಾಗಿದೆ.

Contact Your\'s Advertisement; 9902492681

ಕಾರಣ ರಜೆ ಘೋಷಿಸುವ ಮೂಲಕ ಅಂದು ಜನರಿಗೆ ಅದನ್ನು ವಿವಿಧ ಮೂಲಕಗಳ ಮುಖಾಂತರ ವಿಕ್ಷಿಸಲು ಅನುಕೂಲವಾಗಲು ರಜೆ ನೀಡಲು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here