ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಸಮ್ಮೇಳನ 27 ರಂದು

0
74

ಕೊಪ್ಪಳ: ‘ಕುಕನೂರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್, ಚಿತ್ರದುರ್ಗದ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಮೈಸೂರಿನ ಜೆಸ್ಟ್ ಮಾತ್ ಮಾತಲ್ಲಿ ಸ್ನೇಹ ಕೂಟ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಜನೆವರಿ 27 ರಂದು ಅಖಿಲ ಕನಾ೯ಟಕ 7ನೆಯ ಸಾಂಸ್ಕೃತಿಕ ಸಮ್ಮೇಳನ ಜರುಗಲಿದೆ’ ಎಂದು ಸಮ್ಮೇಳನ ಸಂಚಾಲಕರಾದ ರುದ್ರಪ್ಪ ಭಂಡಾರಿ ಹಾಗೂ ಎಚ್. ಸತೀಶ್ ಕುಮಾರ್ ಅವರು ಜಂಟಿಯಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

‘ಸಾಂಸ್ಕೃತಿಕ ಕನ್ನಡ ಹಬ್ಬ , ವಿಚಾರ ಸಂಕಿರಣ ಹಾಗೂ ಚುಟುಕು ಕವಿಗೋಷ್ಠಿ ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ, ದಾಸರ ಪದಗಳು ಕಾರ್ಯಕ್ರಮ, ನೃತ್ಯ, ಭಜನೆ ,ಜಾನಪದ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮ ಹಾಗೂ ಸಾಧಕರಿಗೆ ಅಭಿನಂದನಾ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದರು.

Contact Your\'s Advertisement; 9902492681

‘ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಹೆಸರನ್ನು ಕೂಡಲೇ ಟ್ರಸ್ಟ್ ನ ಅಧ್ಯಕ್ಷ ರುದ್ರಪ್ಪ ಭಂಡಾರಿ ಮೊಬೈಲ್ ಸಂಖ್ಯೆ : 7815985505 ಹಾಗೂ ಸಾಹಿತ್ಯ ವೇದಿಕೆಯ ಎಚ್. ಸತೀಶ್ ಕುಮಾರ ಅವರ ಮೊಬೈಲ್ 9980448982 ಸಂಖ್ಯೆ ಗೆ ಸಂಪರ್ಕಿಸಿ ಹೆಸರು ನೊಂದಾಯಿಸಬೇಕೆಂದು’ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here