ಅಕ್ಕಲಕೋಟ ರೇವಣ್ಣಸಿದ್ದ ಶಿವಶರಣರ 162 ನೇ ಜಯಂತಿ ಆಚರಣೆ

0
40

ಕಲಬುರಗಿ: ನಗರದ ಸದ್ಗುರು ಶ್ರೀ. ದಾಸಿಮಯ್ಯ ಲಾ ಛೇಂಬರ್ ನಲ್ಲಿ ರೇವಣ್ಣಸಿದ್ದ ಶಿವಶರಣರು ಅಕ್ಕಲಕೋಟ ಅವರ 162 ನೇ ಜಯಂತಿ ಆಚರಣೆ ಮಾಡಲಾಯಿತು.

ಶರಣರ ಅನುಯಾಯಿಗಳ ಬಳಗದ ವತಿಯಿಂದ ಹಮ್ಮಿಕೊಂಡ 162 ನೇ ಜಯಂತಿ ಆಚರಿಸಲಾಯಿತು, 2023 ರಲ್ಲಿ ಜಿಡಗಾ ಗ್ರಾಮದಲ್ಲಿ ಜರುಗಿದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಆಳಂದ ನಿಂದ ಸೋಲಾಪುರ ಮಾರ್ಗದಲ್ಲಿರುವ ಶಾಕಾಪೂರ್ ಗ್ರಾಮದ ಹತ್ತಿರ ವಿರುವ ಶ್ರೀ ಗುರುನಾಥಾರೂಢರ ಪಾವನ ಸ್ಥಳ ಅಭಿವೃದ್ಧಿಗೆ ಉದ್ದೇಶಿಸಿ ನೀಡಲಾದ ಮನವಿಯನ್ನು ಪರಿಗಣಿಸಲು ಸರಕಾರಕ್ಕೆ ಕೊರಲಾಯಿತು.

Contact Your\'s Advertisement; 9902492681

ಮುಖ್ಯಮಂತ್ರಿಗಳ ಸಲಹೆಗಾರರಾಗಿ ಆಯ್ಕೆ ಗೊಂಡಿರುವ ಆಳಂದ ಶಾಸಕರಾದ ಬಿ.ಆರ್. ಪಾಟೀಲರು ಈಗ ಉನ್ನತ ಸ್ಥಾನದಲ್ಲಿ ಇರುವ ಕಾರಣ ನಮ್ಮ ಸಮಾಜದ ಬೇಡಿಕೆಯನ್ನು ಆದ್ಯತೆ ಮೇರೆಗೆ ಈಡೇರಿಸುವ ನಿಟ್ಟಿನಲ್ಲಿ, ಶರಣರ ಕ್ಷೇತ್ರ ಪ್ರವರ್ಧಮಾನಕ್ಕೆ ತರಲು ಈಗಾಗಲೇ ಕೋರಲಾಗಿದೆ. ಅಲ್ಲದೆ ಲಿಖಿತವಾಗಿ ಅಧಿಕೃತವಾಗಿ ಇನ್ನೊಮ್ಮೆ ಮನವಿ ನೀಡಿ ಅವರಲ್ಲಿ ವಿಶೇಷವಾಗಿ ಕೊರಲಾಗುವುದು.

ವಚನ ತತ್ವಗಳು, ಶರಣರ ವಿಚಾರಗಳು ಮುಟ್ಟಿಸುವ ನಿಟ್ಟಿನಲ್ಲಿ ಜ. 19ರಂದು ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಪ್ರಥಮ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಳ್ಳುವ ಮುಖಾಂತರ ಕಲಬುರಗಿ ಶರಣರ ಅನುಯಾಯಿಗಳ ಬಳಗ ಸಹಕಾರ ನೀಡುವುದಾಗಿ ಹೇಳಿದರು.

ಜಯಂತಿ ಉದ್ದೇಶಿಸಿ ಮಾತನಾಡಿದ ಶಿವಲಿಂಗಪ್ಪ ಅಷ್ಟಗಿ ಯವರು ಶರಣ ತತ್ವ , ಸಿದ್ಧಾಂತ ಪ್ರತಿಯೊಬ್ಬರೂ ಅಪ್ಪಿಕೊಂಡರೆ ಮಾತ್ರ ವೈಚಾರಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾರ್ಯಕ್ರಮದ ಸಂಚಾಲಕರು ಹಾಗೂ ತೊಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ್ ಮಾತನಾಡಿ, ಜನಸಾಮಾನ್ಯರಿಗೆ ಧ್ವನಿ ನೀಡಿದ ವಚನಗಳನ್ನು ಸಮಾಜಕ್ಕೆ ಮುಟ್ಟಿಸುವ ಪ್ರಯತ್ನ ಮಾಡೋಣವೆಂದು ತಿಳಿಸಿದರು, ಸಮಾಜದ ಪ್ರಮುಖರಾದ ವೆಂಕಟೇಶ್ ಬಲಪೂರ್, ನ್ಯಾಯವಾದಿ ವಿನೋದಕುಮಾರ ಜೇನವೆರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here