ಆಳಂದ-ಹಾವೇರಿ ಸಾರಿಗೆ ಬಸ್ ಕಾರ್ಯಾಚರಣೆಗೆ ಬಿ.ಆರ್.ಪಾಟೀಲ್ ಚಾಲನೆ

0
9

ಕಲಬುರಗಿ: ಆಳಂದ-ಹಾವೇರಿ ವಾಯಾ ಮಾದನಹಿಪ್ಪರಗಾ ಮಾರ್ಗದ ಸಾರಿಗೆ ಬಸ್ ಕಾರ್ಯಾಚರಣೆಗೆ ಗುರುವಾರ ಆಳಂದ ತಾಲೂಕಿನ ಮಾದನಹಿಪ್ಪರಗಾ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ‌ ಬಿ.ಆರ್.ಪಾಟೀಲ ಅವರು ಚಾಲನೆ ನೀಡಿದರು.

ಈ ಬಸ್ ಪ್ರತಿ ದಿನ ಆಳಂದ ಬಸ್‌ ನಿಲ್ದಾಣದಿಂದ ಮದ್ಯಾಹ್ನ 3.30ಕ್ಕೆ ಹೊರಟು, ಮಾದನ ಹಿಪ್ಪರಗಾಗೆ 4.30ಕ್ಕೆ ತಲುಪಿ ಅಲ್ಲಿಂದ ಅಫಜಲಪುರ- ಸಿಂದಗಿ-ವಿಜಯಪುರ- ಜಮಖಂಡಿ- ಲೋಕಾಪುರ, ಸವದತ್ತಿ- ಧಾರವಾಡ- ಹುಬ್ಬಳ್ಳಿ ಮಾರ್ಗವಾಗಿ ಮರು ದಿನ ಬೆಳಿಗ್ಗೆ 6 ಗಂಟೆಗೆ ಹಾವೇರಿಗೆ ತಲುಪಲಿದೆ. ಇದೆ ಮಾರ್ಗದಲ್ಲಿ ಪ್ರತಿ ದಿನ ಸಂಜೆ 5.30 ಗಂಟೆಗೆ ಹಾವೇರಿಯಿಂದ ಹೊರಟು ಮರು ದಿನ ಬೆಳಿಗ್ಗೆ 7 ಗಂಟೆಗೆ ಆಳಂದ ತಲುಪಲಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾದನಹಿಪ್ಪರಗಾ ವಿರಕ್ತ ಮಠದ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ಸಿದ್ದಪ್ಪ ಜಿ. ಗಂಗಾಧರ, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಕುಮಾರ ಡಿಗ್ಗಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ ಹುಸೇನ್, ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಅಂಕಿ ಸಂಖ್ಯೆ ಅಧಿಕಾರಿ ಮಲ್ಲಿನಾಥ ಸರಸಂಬಿ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here