ಅಂಬೇಡ್ಕರ್ ಅರಿವು ಪುಸ್ತಕ ಮಕ್ಕಳ ಮನ ಮುಟ್ಟುವುದಕ್ಕೆ ಸಹಕಾರಿ

0
11

ರಾಯಚೂರು; ಅಂಬೇಡ್ಕರ್ ಅರಿವು ಪುಸ್ತಕ ಮನೆ ಮನಗಳಿಗೆ ಮುಟ್ಟಿಸುವ ಮೂಲಕ ಮಕ್ಕಳ ಮನಸ್ಸನ್ನು ಮುಟ್ಟುವುದಕ್ಕೆ ಸಹಕಾರಿಯಾಗಿದೆ ಎಂದು ದಲಿತ ಮುಖಂಡ ಎಂ.ಆರ್ ಬೇರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಲ್ಕುಂಡಿ ಮಹದೇವಸ್ವಾಮಿರವರ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

Contact Your\'s Advertisement; 9902492681

ಅಂಬೇಡ್ಕರ್ ಅವರ ಚಿಂಚನೆಗಳು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅರಿವು ಕುರಿತು ಪುಸ್ತಕ ರಚನೆ ಮಾಡಿದ್ದಾರೆ, ಅಂಬೇಡ್ಕರ್ ಅವರ ಕನಸುನ್ನು ಬಿತ್ತರಿಸಲು ಭರವಸೆ ಮೂಡಿಸಲು ಈ ಪುಸ್ತಕವಾಗಿದ್ದು, ದೇಶವೇ ಸಂವಿಧಾನದ ಮೇಲೆ ಆಧಾರವಾಗಿದ್ದು ಸಂವಿಧಾನದ ರಚನೆ ಕಾರಣರಾದ ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ, ಮೊದಲು ಮಕ್ಕಳಿಗೆ ಅಂಬೇಡ್ಕರ್ ಅವರ ಚಿಂತನೆಗಳು, ಅವರ ಆಶಯಗಳ ಕುರಿತು ಮನ ಮುಟ್ಟುವಂತಹ ಕೆಲಸ ನಡೆಬೇಕಿದೆ, ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಸುತ್ತಿದ್ದು, ಅಂಬೇಡ್ಕರ್ ಅರಿವು ಪುಸ್ತಕ ಇದರ ಭಾಗವಾಗಿದೆ ಎಂದರು.

ಸಾಕಷ್ಟು ಜನರಿಗೆ ಸಂವಿಧಾನದ ಬಗ್ಗ ಅರಿವು ಇಲ್ಲ ಕೆಲವರು ನೊಡಿದರೂ ನೊಡದಂತೆ ಇದ್ದಾರೆ, ಇದರಿಂದ ಅಂಬೇಡ್ಕರ್ ಅವರ ಆಶಯಗಳು ಸಾಕಾರಗೊಳಿಸುವಲು ಆಗುತ್ತಿಲ್ಲವೆಂದು ವಿಶಾಸ ವ್ಯಕ್ತಪಡಿಸಿದರು.

ಅಂಬೇಡ್ಕರ್ ಎನ್ನುವುದು ಸಮುದ್ರವಿದ್ದಂತೆ ಸಾಕಷ್ಟು ಕಲಿಯಬೇಕಿದೆ, ಎಷ್ಟು ಕಲಿತರೂ ಕಡೆಮೆ, ಮನೆ ಮನೆಗೆ ಅಂಬೇಡ್ಕರ್ ಅರಿವು ಕುರಿತು ಮಕ್ಕಳಿಗೆ ಮನದಟ್ಟಾಗುವಂತೆ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ ಎಂದು ತಿಳಿಸಿದರು.

ಸಾಮಾಜಿಕ ಚಿಂತನೆ ಹೋರಾಟಗಾರ ಆರ್ ಮಾನಸಯ್ಯ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ಅಲ್ಲಿಂದ ಬಂದು ಇಲ್ಲಿ ಅಂಬೇಡ್ಕರ್ ಅರಿವು ಪುಸ್ತಕ ಬಿಡುಗಡೆ ಗೊಳಿಸುತ್ತಿದ್ದು, ಇಲ್ಲಿನ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ, ಈ ಹಿಂದೆ ಶಾಲೆಯ ಗೊಡೆಗಳ ಮೇಲೆ ಬರಹಗಳಿದ್ದವು, ಇಂದಿನ ಬಾಲಕರು ಮುಂದಿನ ನಾಗರೀಕರು, ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಬರಹಗಳು ಇಂದು ಮರೆಯಾಗಿವೆ, ಈ ಗಾದೆಗಳು ಸಾಕಷ್ಟು ಪ್ರಭಾವ ಬೀರುತ್ತಿದ್ದವು, ಮಕ್ಕಳಿಗೆ ದೇಶದ ಚರಿತ್ರೆ, ಅದ್ಯಯನ ಅರಿವಿಲ್ಲ, ಸಾಂಸ್ಕೃತಿಕ ಪರಂಪರೆ, ಅದ್ಯಯನದ ಕೊರತೆ ಇದೆ ಎಂದರು.

ಮಕ್ಕಳಿಗೆ ವಿಷ ಬೀಜದ ಬಿತುತ್ತಿದ್ದಾರೆ, ಮಕ್ಕಳಲ್ಲಿ ದ್ವೇಶ, ಅಸೂಯೆ, ಜಾತಿವಾದ, ತಾರತಮ್ಯ ಬೆಳೆಸುತ್ತಿದ್ದಾರೆ, ಮನುವಾದದತ್ತ ಕೊಡ್ಯೊಯ್ಯುತ್ತಿದ್ದಾರೆ, ಇದು ದೇಶಕ್ಕೆ ಮಾರಕ ವಾಗಿದೆ, ಮನುವಾದ ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದಕ್ಕೆ ಅಂಬೇಡ್ಕ ರ್ ಅರಿವಿನ ಔಷಧಯಾಗಿದೆ ಎಂದು ತಿಳಿಸಿದರು.

ಈ ಅಂಬೇಡ್ಕರ್ ಅರಿವು ಪುಸ್ತಕದಲ್ಲಿ ಅನೇಕ ದಾರ್ಶನಿಕರ ಕಿರು ಪರಿಚಯವಿದೆ, ಬಸವಣ್ಣ, ಬೀಮಬಾಯಿ, ಗೌತಮ ಬುದ್ಧ, ಅಕ್ಷರ ಮಾತೆ ಸಾವಿತ್ರಬಾಯಿ ಫುಲೆ ಸೇರಿ ಸಾಕಷ್ಟು ಮಾಹಿತಿ ಇದರಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಆರ್‌ಸಿಎಫ್ ಉಪಾಧ್ಯಕ್ಷ ಆದಿ ನಗನೂರು, ಕೆಎಸ್‌ಆರ್‌ಡಿಪಿಆರ್‌ ಎಸ್ಸಿ ಎಸ್ಟಿಯ ರಾಜ್ಯ ಖಜಾಂಚಿ ಚಂದ್ರಕಾಂತ ನೇರಳೆ, ಕೃತಿ ಕತೃ ಮಲ್ಕುಂಡಿ ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here