ಮಲ್ಲಪ್ಪ ಭೀಮರಾಯಗೆ ಹಂಪಿ ವಿ.ವಿ ಪಿ.ಎಚ್.ಡಿ ಪದವಿ ಪ್ರದಾನ

0
7

ಸುರಪುರ: ನಗರದ ಕುಂಬಾರಪೇಟದ ಮಲ್ಲಪ್ಪ ಭೀಮರಾಯರವರಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ.

ಮಲ್ಲಪ್ಪ ಭೀಮರಾಯರವರು ಕನ್ನಡ ವಿಶ್ವ ವಿದ್ಯಾಲಯದಲ್ಲಿನ ಸಮಾಜ ವಿಜ್ಞಾನಗಳ ನಿಕಾಯದ ಜಾನಪದ ಅಧ್ಯಯನ ವಿಭಾಗದ ಬಾಹ್ಯ ಮಾರ್ಗದರ್ಶಕರಾದ ಡಾ. ಸಿ. ಪುಟ್ಟೇಶ ಸಹ ಪ್ರಾಧ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ನೃಪತುಂಗ ವಿಶ್ವ ವಿದ್ಯಾಲಯ, ಬೆಂಗಳೂರು ಅವರ ಮಾರ್ಗದರ್ಶನದಲ್ಲಿ “ಸುರಪುರ ತಾಲೂಕಿನ ತಳಸಮುದಾಯಗಳ ಪ್ರದರ್ಶನ ಕಲೆಗಳ ಆಧುನಿಕತೆ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು ಪಿಎಚ್.ಡಿ. ಮಹಾಪ್ರಬಂಧವನ್ನು ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಸಲ್ಲಿಸಿ ಮಂಡಿಸಿರುತ್ತಾರೆ.

Contact Your\'s Advertisement; 9902492681

ಕನ್ನಡ ವಿಶ್ವವಿದ್ಯಾಲಯದ ೩೨ನೇ ನುಡಿ ಹಬ್ಬ(ಘಟಿಕೋತ್ಸವ)ದಲ್ಲಿ ಮಲ್ಲಪ್ಪ ಭೀಮರಾಯ ಅವರಿಗೆ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿಯನ್ನು ಅಂದು ನಡೆದ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಆದಾ ಡಾ. ಎಂ. ಸಿ. ಸುಧಾಕರ ಮತ್ತು ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳು ಆದಾ ಡಾ. ಡಿ. ಎಂ.ಪರಮಶಿವಮೂರ್ತಿ ಅವರುಗಳಿಂದ ಪಿ.ಎಚ್.ಡಿ ಡಾಕ್ಟಾರೆಟ್ ಪದವಿಯ ಪ್ರಮಾಣ ಪತ್ರವನ್ನು ನುಡಿ ಹಬ್ಬದಲ್ಲಿ ನೀಡಿ ಗೌರವಿಸಲಾಯಿತು.

ಇವರ ಈ ಉನ್ನತ ಶಿಕ್ಷಣದ ಸಾಧನೆಗೆ ಕುಟುಂಬದವರು ಮತ್ತು ಕುಂಬಾರಪೇಟಯ ಸಮಸ್ತ ನಾಗರಿಕರು ಮತ್ತು ಆತ್ಮೀಯ ಗೆಳೆಯರು ಶುಭ ಹಾರೈಸಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here