ಹೈಯಾಳಲಿಂಗೇಶ್ವರ ದೇವರ ಜಾತ್ರೆ ಕಾರಣಿಕ ನುಡಿದ ಸಕ್ರೆಪ್ಪ ಮುತ್ಯಾ

0
21

ತುರ್ತು ಮುಂಗಾರಿ ಮಿಂಚಿತು ಚಪ್ಪಂಡರ ದೇಶಕ್ಕೆ ಸರ್ವಮಳೆ

ಸುರಪುರ:ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಆರಾಧ್ಯ ದೇವ ಹೈಯಾಳಲಿಂಗೇಶ್ವರ ದೇವರ ಜಾತ್ರೆ ಅದ್ಧೂರಿಯಾಗಿ ಜರುಗಿತು.

Contact Your\'s Advertisement; 9902492681

ಮುಂಜಾನೆಯಿಂದಲೂ ಗ್ರಾಮದ ಜನರು ದೇವಸ್ಥಾನಕ್ಕೆ ಆಗಮಿಸಿ ಹೂ ಹಣ್ಣು ನೈವೆದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು,ಅಲ್ಲದೆ ದೇವಸ್ಥಾನದಲ್ಲಿ ಪ್ರಸಾದ ಸೇವೆಯನ್ನು ನೆರವೇರಿಸಿದರು.ಸಂಜೆ ನಡೆದ ದೇವರ ಉತ್ಸವದ ಸಂದರ್ಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಯವರಾದ ಸಕ್ರೆಪ್ಪ ತಾತನವರು ದೇವರ ಕಾರಣಿಕ ಹೇಳಿಕೆಯನ್ನು ನುಡಿದು.ತುರ್ತು ಮುಂಗಾರಿ ಮಿಂಚಿತು,ಚಪ್ಪಂಡರ ದೇಶಕ್ಕೆ ಸರ್ವ ಮಳೆ ಎಂದು ಹೇಳಿಕೆಯನ್ನು ನುಡಿಯುತ್ತಿದ್ದರೆ ಭಾಗವಹಿಸಿದ್ದ ಎಲ್ಲರು ಜಯಘೋಷ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.ದೇವರಗೋನಾಲ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here