ವಾಡಿ; ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ಯಿಂದ ಸ್ವಚ್ಚತಾ ಕಾರ್ಯ

0
93

ವಾಡಿ; ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಭಾರತೀಯ ಜನತಾ ಪಕ್ಷದ ಸ್ವಚ್ಛತಾ ಅಭಿಯಾನದ ಭಾಗವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಸೇವಲಾಲ ಮಂದಿರ, ಹನುಮಾನ ದೇವಸ್ಥಾನ,ಡಾ ಬಿ ಆರ್ ಅಂಬೇಡ್ಕರ್ ವೃತ್ತಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು ಅದರಂತೆ ವಾರ್ಡ್ ನಲ್ಲಿರುವ ಪ್ರತಿ ದೇವಾಲಯಗಳ ಸ್ವಚ್ಚತಾ ಕಾರ್ಯದಲ್ಲಿ ನಮ್ಮ ಪಕ್ಷದವರ ತೊಡಗುತ್ತಿದ್ದಾರೆ.

Contact Your\'s Advertisement; 9902492681

ನೆಚ್ಚಿನ ಪ್ರಧಾನಿ ಮೋದಿ ಜಿ ಅವರ ಕರೆಯ ಮೆರೆಗೆ ಜನವರಿ 14 ರಿಂದ ಪ್ರಾರಂಭವಾದ ಈ ಅಭಿಯಾನ, ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಸಮಾರಂಭದ ದಿನವಾದ ಜನವರಿ 22 ರವರೆಗೆ ಮುಂದುವರಿಯಲಿದೆ ಎಂದರು.

ಅಯೋಧ್ಯೆಯ ಶ್ರೀರಾಮಮಂದಿರ ಪುನರ ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಪುಣ್ಯಸ್ಥಳಗಳ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗುತ್ತಿರುವುದರಿಂದ ನಮ್ಮಲ್ಲಿ ಭಕ್ತಿಯೊಂದಿಗೆ ಧನ್ಯತಾ ಭಾವ ಮೂಡುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಹಬ್ಬದ ವಾತಾರವಣ ಇದೆ.500 ವರ್ಷಗಳ ಕಾಲದ ಕನಸು ಸಾಕಾರಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ವಿಠಲ ನಾಯಕ,ಅರ್ಜುನ ಕಾಳೇಕರ,ರಾಮಚಂದ್ರ ರೆಡ್ಡಿ,ಹರಿ ಗಲಾಂಡೆ ,ಕಿಶನ ಜಾದವ,ಆನಂದರಾವ ಡೌಳೆ, ಆನಂದ ಇಂಗಳಗಿ, ಅಯ್ಯಣ್ಣ ದಂಡೋತಿ, ಶಿವಕುಮಾರ ಹೂಗಾರ, ಪ್ರೇಮ್ ರಾಠೋಡ, ಮಲ್ಲಿಕಾರ್ಜುನ ಸಾತಖೇಡ, ಚಂದ್ರಶೇಖರ್ ಬೆಣ್ಣೂರ, ಬಸವರಾಜ್ ಪಗಡಿಕರ,ಚಂದ್ರಾಮ ರಾಜೋಳ್ಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here