ದಲಿತ ಸಂಘರ್ಷ ಸಮಿತಿಯಿಂದ ಶೂದ್ರ ಶಂಭುಕ ಮುನಿಯವರಿಗೆ ಗೌರವ ಸಮರ್ಪಣೆ

0
22

ಕಲಬುರಗಿ: ವಾಲ್ಮೀಕಿ ರಾಮಾಯಣದಲ್ಲಿ ಶಂಭುಕ ಎಂಬ ಶೂದ್ರ ಬ್ರಾಹ್ಮಣರು ಮಾತ್ರ ಮಾಡಬಹುದಾದ ತಪಸ್ಸನ್ನು ಮಾಡಿದ ಎಂಬ ಕಾರಣಕ್ಕೆ ರಾಮನು ಅವನ ಶಿರವನ್ನು ಕತ್ತರಿಸಿದನು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ನಗರದ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ  ಭಾರತ ಸಂವಿಧಾನ ಪೀಠಿಕೆ ಹಿಡಿದು ಮಹರ್ಷಿ ಶೂದ್ರ ಶಂಭುಕ ಮುನಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಿತು. ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಪ್ರೊ.ಆರ್.ಕೆ.ಹುಡಗಿ, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಅಶ್ವಿನಿ ಮದನಕರ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here