ಸಂಗೊಳ್ಳಿ ರಾಯಣ್ಣ ರಾಜ್ಯಭಿಷೇಕ ಉತ್ಸವ ನಂದಗಡ ಚೆಲೋ; ಜನ ಸ್ವರಾಜ ಯಾತ್ರೆ

0
7

ಕಲಬುರಗಿ: ರಾಷ್ಟ್ರೀಯ ಸಮಾಜ ಪಕ್ಷ ಆರ್‍ಎಸ್‍ಪಿ ಕರ್ನಾಟಕ ರಾಜ್ಯ ಘಟಕವು ದಿನಾಂಕ 24, 25, 26 ಜನೆವರಿ 2024 ರ ವರೆಗೆ ನಂದಗಡ ಚೆಲೋ ಜನ ಸ್ವರಾಜ್ ಯಾತ್ರೆ ಆಯೋಜಿಸಲಾಗಿದೆ.

ಆರ್‍ಎಸ್‍ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ನೇತೃತ್ವದಲ್ಲಿ ಕಲಬುರಗಿ, ವಿಜಯಪುರ ಬಾಗಲಕೋಟ ಮೂಲಕ ಸ್ವತಂತ್ರವೀರ ಸ್ವರಾಜ ನಾಯಕ ಸಂಗೊಳ್ಳಿ ರಾಯಣ್ಣನವರ ರಾಜ್ಯಭಿಷೇಕ ಉತ್ಸವ 2024ಕ್ಕೆ ಚಾಲನೆ ನಡೆದು ಜ. 26 ರಂದು ಬೆಳಿಗ್ಗೆ 9-00 ಗಂಟೆಗೆ ಸಾವಿರ ಸಾವಿರ ಪಕ್ಷದ ಕಾರ್ಯಕರ್ತರು ಉತ್ಸವದಲ್ಲಿ ಭಾಗವಹಿಸುವರು.

Contact Your\'s Advertisement; 9902492681

ಆರ್‍ಎಸ್‍ಪಿ ರಾಷ್ಟ್ರೀಯ ಅಧ್ಯಕ್ಷ ಮಹಾದೇವ ಜಾನಕರರವರು ಮುಖ್ಯ ಅತಿಥಿಯಾಗಿ ಮಾತನಾಡುವರು.ಅಧ್ಯಕ್ಷರು ಸಿದ್ದಪ್ಪ ಎಲ್. ಅಕ್ಕಿ ಸಾಗರ ರಾಷ್ಟ್ರೀಯ ಸಮಾಜ ಎಂಪಲಾಯ್ಸ್ ಫಡರೇಷನ್ ವಹಿಸುವರು.

ಈ ಉತ್ಸವದಲ್ಲಿ ಧರ್ಮಣ್ಣ ತೊಂಟಾಪುರ ರಾಜ್ಯಾಧ್ಯಕ್ಷರು, ಸುನೀಲ ಕಿನ್ನೂರ ಕರ್ನಾಟಕ ಉಸ್ತುವಾರಿ, ಸುನೀಲ ಬಂಡಗಾರ ಉತ್ತರ ಕರ್ನಾಟಕ ಉಸ್ತುವಾರಿ,ಶರಣಪ್ಪ ಪೂಜಾರಿ ವಿಭಾಗ ಅಧ್ಯಕ್ಷ ಕಲಬುರಗಿ,ಶ್ರೀಮತಿ ಮನುಭಾಯಿ ಮುಕ್ಕಾ ಮಹಿಳಾ ಘಟಕ ವಿಭಾಗ ಅಧ್ಯಕ್ಷ ಕಲಬುರಗಿ, ಬಸವರಾಜ ಮುಕ್ಕಾಅಧ್ಯಕ್ಷ ಬೆಂಗಳೂರು ವಿಭಾಗ, ದೇವಿಂದ್ರ ಕ್ಯಾಸಾಪ್ಪಳ್ಳಿ ಅಧ್ಯಕ್ಷ ಕಲಬುರಗಿ, ಶ್ರೀಮಂತ ಮಾವನೂರ, ಪ್ರಧಾನ ಕಾರ್ಯದರ್ಶಿ, ರಮೇಶ ಶಹಾಬಾದ ಅಧ್ಯಕ್ಷ ಶಹಾಬಾದ, ಮಹಾಂತಪ್ಪ ದೊಡ್ಡಮನಿ ಉಪಾಧ್ಯಕ್ಷರು ಜೇವರ್ಗಿ ಸೇರಿದಂತೆ ಇತರೆ ನೂರಾರು ಪಕ್ಷದ ಕಾರ್ಯಕರ್ತರು ಜನ ಸ್ವರಾಜ ಯಾತ್ರೆ ನಂಧಗಡ ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಶರಣಬಸಪ್ಪ ದೊಡ್ಡಮನಿ ರಾಷ್ಟ್ರೀಯ ಸಮಾಜ ಪಕ್ಷದ ಹಿರಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿ. ಎಂ. ರಾವುರ ರಾಜ್ಯ ಕಾರ್ಯದರ್ಶಿ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here