ಉಗ್ರಾಣ ನಿಗಮದ ಅಧ್ಯಕ್ಷರಾಗಿ ಶಾಸಕ ಆರ್.ವಿ.ನಾಯಕ ಅಧಿಕಾರ ಸ್ವೀಕಾರ

0
75

ಸುರಪುರ: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಬೆಂಗಳೂರಿನ ಪ್ರಿಂರೋಸ್ ರಸ್ತೆಯಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಸ ಅಧಿಕಾರಿ ಸ್ವೀಕಾರ ಸಮಾರಂಭದಲ್ಲಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ,ಕೆ.ಎನ್.ರಾಜಣ್ಣ ಅವರು ಹಾಗು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಮ್ ಕ್ರಾಂತಿ ಭಾಗವಹಿಸಿದ್ದರು.

ಮೊದಲಿಗೆ ಲಕ್ಷ್ಮೀ ವೆಂಕಟೇಶ್ವರ ಪೂಜೆ ಸಲ್ಲಿಸಿ ನಂತರ ಆದೇಶ ಪತ್ರದ ಕಡತಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿ,ರಾಜ್ಯದಲ್ಲಿನ ರೈತರ ಏಳಿಗೆಗೆ ನಿಗಮ ದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ರಾಜಾ ವೇಣುಗೋಪಾಲ ನಾಯಕ,ವಿಠ್ಠಲ್ ಯಾದವ್,ವೆಂಕೋಬ ಯಾದವ್,ರಾಜಾ ವಾಸುದೇವ ನಾಯಕ,ರಾಜಾ ಸಂತೋಷ ನಾಯಕ,ರಾಜಾ ಕುಮಾರ ನಾಯಕ,ಶಾಂತಗೌಡ ಚನ್ನಪಟ್ಟಣ,ರಾಜಶೇಖರಗೌಡ ವಜ್ಜಲ್,ರಾಜಾ ಸುಶಾಂತ ನಾಯಕ, ವೆಂಕಟೇಶ ಹೊಸ್ಮನಿ,ಸೂಗುರೇಶ ವಾರದ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಗೋಪಾಲ ದೊರೆ, ಮಲ್ಲಣ್ಣ ಸಾಹು ಮುಧೋಳ,ಅಬ್ದುಲ ಗಫೂರ ನಗನೂರಿ,ಮಹಿಬೂಬ ಒಂಟಿ,ಭಂಡಾರೆಪ್ಪ ನಾಟೇಕಾರ,ಭೀಮರಾಯ ಕುಂಬಾರ ಕುಂಬಾರಪೇಟ,ಹಣಮಂತ್ರಾಯ ಮಕಾಶಿ,ರಾಘವೇಂದ್ರ ಕುಲಕರ್ಣಿ,ಮಹ್ಮದ್ ಮೌಲಾ ಸೌದಾಗರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here