ಭೋವಿ ಸಮಾಜಕ್ಕೆ ಸಿಕ್ಕಿರುವ ನಿವೇಶನ ಬೇರೆಯವರಿಗೆ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ

0
25

ಎಂ.ಡಿ ಮಶಾಕ ಚಿತ್ತಾಪುರ

ಚಿತ್ತಾಪುರ: ಸರ್ವೆ ನಂಬರ್ 282ರಲ್ಲಿ ಭೋವಿ ಸಮಾಜಕ್ಕೆ 2 ಎಕರೆ ಇನ್ನುಳಿದಂತೆ ಬೇರೆ ಸಮಾಜದವರಿಗೆ ಸ್ಥಳವನ್ನು ನಿಗಧಿಪಡಿಸಿರುವುದನ್ನು ಖಂಡಿಸಿ ಚಿತ್ತಾಪುರ ಪಟ್ಟಣದ ತಹಶೀಲ್ ಕಚೇರಿ ಎದರುಗಡೆ ಭೋವಿ ವಡ್ಡರ್ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಕಟ್ಟಿಮನಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ನಂತರ ತಹಶೀಲ್ದಾರ್ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹೇಶ ಕಾಶಿ, ರಾಮು ಹರವಾಳ, ಮಹೇಶ ಎನ್ ಕಾಶಿ, ವೆಂಕಟೇಶ ಇಂಗಳಗಿ, ತಮ್ಮಣ್ಣ, ಚಂದರ್, ನಾಗರಾಜ, ಈರಣ್ಣ, ಶಂಕರ್, ಭೀಮು ಕರದಾಳ, ಯಮನಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here