ಶ್ರವಣಕುಮಾರ ಮೇಲಿನ ಕೇಸ್ ರದ್ದುಗೊಳಿಸಲು ವಾಲ್ಮೀಕಿ ನಾಯಕ ಸಂಘ ಹೋರಾಟ

0
16

ಸುರಪುರ: ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಹೋರಾಟಗಾರ ಹಾಗೂ ಪತ್ರಕರ್ತ ಶ್ರವಣಕುಮಾರ ಡಿ ನಾಯಕ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದ್ದು,ಅದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕ ದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಶ್ರವಣಕುಮಾರ ಡಿ. ನಾಯಕ ನಮ್ಮ ವಾಲ್ಮೀಕಿ ನಾಯಕ ಸಮುದಾಯದ ಹೋರಾಟಗಾರ ಮತ್ತು ಪತ್ರಕರ್ತರಾಗಿದ್ದು,ಅವರು ಕೆಲವರು ನಕಲಿ ಎಸ್.ಟಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ,ಇದನ್ನು ಸಹಿಸದ ಕೆಲವರು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಚಿಂಚೋಳಿಯಲ್ಲಿ ಅವರ ಮೇಲೆ ಕೇಸ್ ದಾಖಲಿಸಲಾಗಿದೆ,ಮತ್ತು ಪತ್ರಿಕೆಯಲ್ಲಿ ಏನು ಬರಯದಂತೆ ಅವರಿಗೆ ಮಾನಸಿಕ ಹಿಂಸೆ ನೀಡುವ ಕಾರ್ಯ ಮಾಡಲಾಗುತ್ತಿದೆ.ಆದ್ದರಿಂದ ಇಂದು ನಮ್ಮ ಮಹರ್ಷಿ ವಾಲ್ಮೀಕಿ ನಾಯಕ ಈ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಿದ್ದು,ಕೂಡಲೇ ಶ್ರವಣಕುಮಾರ ಡಿ.ನಾಯಕ ಮೇಲೆ ದಾಖಲಿಸಿರುವ ಕೇಸ್ ರದ್ದುಗೊಳಿಸಬೇಕು,ಅವರಿಗೆ ಸೂಕ್ತ ಭದ್ರತೆ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಪ್ರಾದೇಶಿಕ ಆಯುಕ್ತರಿಗೆ ಬರೆದ ಮನವಿಯನ್ನು ತಹಸಿಲ್ದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ,ತಾಲೂಕು ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ,ನಗರ ಘಟಕದ ಅಧ್ಯಕ್ಷ ರಾಜಾ ಮುಕುಂದ ನಾಯಕ,ಕ.ಕ ವಾಲ್ಮೀಕಿ ಸಂಘದ ಅಧ್ಯಕ್ಷ ರಾಜಾ ಪಿಡ್ಡ ನಾಯಕ,ಶಂಕರಗೌಡ ಪಾಟೀಲ್,ಮೌನೇಶ ಶಖಾಪುರ,ಅಯ್ಯಣ್ಣ ಹಾಲಬಾವಿ,ವೆಂಕಟೇಶ ಬೇಟೆಗಾರ,ಹಣಮಂತ ಅಮ್ಮಾಪುರ,ಬಲಭೀಮ ನ್ಯಾಯವಾದಿ,ನಾಗರಾಜ ಪ್ಯಾಪ್ಲಿ,ಪರಶುರಾಮ ಗುಡ್ಡಕಾಯಿ,ವೆಂಕಟೇಶ ನಾಯಕ ಗುಡ್ಡಾಕಾಯಿ,ಅಂಬ್ರೇಶ ಮಾವಿನಮಟ್ಟಿ,ವೆಂಕಟೇಶ ಸತ್ಯಂಪೇಟೆ,ದುರ್ಗಪ್ಪ ಡೊಣ್ಣಿಗೇರ,ಬಸವರಾಜ ದೇವರಗೋನಾಲ,ತಿಮ್ಮಯ್ಯ ದೇವರಗೋನಾಲ,ವಿಜಯಕುಮಾರ ನಾಯಕ,ದತ್ತು ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here