ವಿದ್ಯಾರ್ಥಿಗಳೇ ಕಾಲೇಜಿನ ಆಸ್ತಿ

0
21

ಶಹಾಪುರ; ನಗರದ ಸಿ.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಪ್ರಿಯಾಂಕ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಮಲ್ಲಿನಾಥ ಬಡಿಗೇರ,ಮುಖ್ಯ ಅತಿಥಿಗಳಾಗಿ ಬನಸಿರಿ ಪದವಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ಡಿ.ಪಿ.ಸಜ್ಜನ ಅವರು ವಿದ್ಯಾರ್ಥಿಗಳೆ ಕಾಲೇಜಿನ ಆಸ್ತಿ, ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು,ನಿಮ್ಮ ತಂದೆ,ತಾಯಿ,ಮನೆತನದ ಕನಸು ನನಸು ಮಾಡಿ ಹಾಗೂ ಕಾಲೇಜಿಗೆ ಕೀರ್ತಿ ತನ್ನಿರಿ ಎಂದು ಶುಭ ಹಾರೈಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದೆ ನಮ್ಮ ಕರ್ತವ್ಯ ಎಂದರು,ಕಾಲೇಜಿನ ಪ್ರಾಂಶುಪಾಲರಾದ ಇಮ್ರಾನ ಸಗರಿ,ಎಲ್ಲಾ ಭೋಧಕ – ಭೋಧಕೇತರ ಸಿಬ್ಬಂದಿ ಹಾಗೂ ಮುದ್ದು ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆ,ಸೀಮಾ,ಸ್ವಾಗತ ಸಾನಿಯ ಮಿರ್ಜಾ,ಕನ್ನಡ ಉಪನ್ಯಾಸಕರಾದ ದೇವೇಂದ್ರಪ್ಪ ಬಿರಾದಾರ ವಂದಿಸಿದರು,ಸಂಸ್ಕೃತಿ ಮತ್ತು ಅಂಬರೀಶ ನಿರೂಪಿಸಿದರು.ಎಂದು ಪ್ರತಿಕಾ ಪ್ರಕಟಣೆಗೆ ಶಶಿಕುಮಾರ ಗೋಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here