ಸುರಪುರ: ರಾಯರ ಗುಡಿಯಲ್ಲಿ ಪುರಂದರದಾಸರ ಆರಾಧನೆ

0
7

ಸುರಪುರ: ನಗರದ ರಾಯರ ಗುಡಿಯಲ್ಲಿ ದಾಸಶ್ರೇಷ್ಠ ಶ್ರೀ ಪುರಂದರದಾಸರ ಆರಾಧನೆಯನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಯಿತು.

ಆರಾಧನೆ ಪ್ರಯುಕ್ತ ಪುರಂದರದಾಸರ ವೇಷಧಾರಿಗಳಾಗಿದ್ದ ಗುರುರಾಜಾಚಾರ್ಯ ಪಾಲ್ಮೂರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಗೋಪಾಳ ಬೇಡುವ ಕಾರ್ಯಕ್ರಮ ನಡೆಯಿತು ನಂತರ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.

Contact Your\'s Advertisement; 9902492681

ವಾಯುದೇವರು ಹಾಗೂ ರಾಯರು, ಟೀಕಾರಾಯರು ಹಾಗೂ ಕೃಷ್ಣದ್ವೈಪಾಯನ ತೀರ್ಥ ಮೂರು ವೃಂದಾವನಗಳಿಗೆ ವಿಶೇಷ ಅಲಂಕಾರ ಹಾಗೂ ನೈವೇದ್ಯ, ಹಸ್ತೋದಕ ನೆರವೇರಿಸಲಾಯಿತು, ಸಾಯಂಕಾಲ ಶ್ರೀ ರಘುವೀರರಾಮಧ್ಯಾನ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಮಂಗಳಾರುತಿ ಮುಂತಾದ ಕಾರ್ಯಕ್ರಮಗಳು ಜರುಗಿದವು.

ಅರ್ಚಕರಾದ ವಾದಿರಾಜ ಬೂದುರು, ನರಸಿಂಹರಾವ ಬಾಡಿಯಾಳ, ಮಧುಸೂದನ ಡಬೀರ,ನರಸಿಂಹ ಭಂಡಿ,ಗುರುರಾಜ ಬಾಡಿಯಾಲ,ಶ್ರೀನಿಧಿ ಐಜಿ,ದಾಮೋದರ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here