ಹಸನಾಪುರ ಗಾಯರಾಣ ಜಾಗ ಒತ್ತುವರಿ ತೆರವುಗೊಳಿಸಲು ಮನವಿ

0
8

ಸುರಪುರ: ನಗರದ ಹಸನಾಪುರ ಗ್ರಾಮದ ಸರ್ವೇ ನಂಬರ್ 73/1,73/2ರ ಕಂದಾಯ ಗಾಯರಾಣ ಜಾಗ ಒತ್ತುವರಿಯಾಗಿದ್ದು,ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಮುಖಂಡರು ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನೇಕರು ಮಾತನಾಡಿ,ಹಸನಾಪುರ ಗ್ರಾಮದಲ್ಲಿನ ಸರಕಾರಿ ಗಾಯರಾಣ ಜಾಗವನ್ನು ಒತ್ತುವರಿ ಮಾಡಲಾಗಿದ್ದು,ಕೂಡಲೇ ಈ ಜಾಗವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.ಅದರಂತೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸಿಲ್ದಾರ್ ಕೆ.ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಸಿ.ಹಡಪದ,ರಾಮಚಂದ್ರಪ್ಪ ಟೊಣಪೆ,ಗುರುನಾಥರೆಡ್ಡಿ ಶೀಲವಂತ,ಮುರಳಿಧರ,ನಾಗರಾಜ ನಾಯಕ,ಮಲ್ಲು ವಿಷ್ಣುಸೇನಾ,ಶಿವು ದಿವಳಗುಡ್ಡ,ಸಚಿನಕುಮಾರ ನಾಯಕ,ರಮೇಶ ಡೊಳ್ಳೆ,ಮೌನೇಶ ಪತ್ತಾರ,ಹಣಮಂತ ತೆಲ್ಲೂರ,ನಿಂಗಪ್ಪ ಮಾಲಗತ್ತಿ,ರಾಜು ಸಿಂದಗಿ,ಸಚಿನ,ಚಂದ್ರು ಪ್ರಧಾನಿ,ಶಿವರಾಜ ಹಸನಾಪುರ,ಹರೀಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here