ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಚಿತ್ತ ಹರಿಸಿ: ಶಾಸಕ ಅಲ್ಲಮಪ್ರಭು ಪಾಟೀಲ

0
20

ಕಲಬುರಗಿ: ವೈದ್ಯಕೀಯ, ಇಂಜನಿಯರಿಂಗ್ ಅಷ್ಟೆ ಶಿಕ್ಷಣದ ಮಾರ್ಗವಲ್ಲ ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು. ವಿಷಯ ಭಾವುಕರಾಗಿ ಓದುವ ಬದಲು ಭಾಷಾ ಭಾವುಕರಾಗಿ ಓದಬೇಕು. ಕಠಿಣ ಪರಿಶ್ರಮ, ಸಮಯ ಪ್ರಜ್ಞೆ, ಧೃಡ ಸಂಕಲ್ಪ ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯ. ಕನಸು ಕಾಣಬೇಕು. ಕಂಡ ಕನಸು ನನಸಾಗಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಜಫ್ರಾಬಾದ್ ಕ್ರಾಸ್‍ನಲ್ಲಿರುವ ಜೆ ಎಸ್ ಸಭಾಗಂಣದಲ್ಲಿ ಆಯೋಜಿಸಿದ್ದ ಸಹಾರಾ ಇಂಗ್ಲಿಷ್ ಮಾಧ್ಯಮ ಶಾಲೆಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಇಂದಿನ ದಿನಮಾನಗಳಲ್ಲಿ ಆಂಗ್ಲ ಭಾಷೆ ಅಗತ್ಯವಿದೆ. ಆದರೆ ಮಾತೃಭಾಷೆ ಕಡೆಗಣಿಸಬಾರದು. ಕನ್ನಡ ನಿಜಜೀವನ ಭಾಷೆ, ಇಂಗ್ಲಿಷ್ ಉಪಜೀವನ ಭಾಷೆ ಹಾಗೂ ಸಂಸ್ಕøತ ಉಜ್ಜಿವನ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸೈಯದ್ ಅನ್ವರ್ ಹುಸೇನಿ, ಸಹಾರಾ ಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷ ಎಂ.ಎ ಸಿದ್ದಿಕಿ, ವಿಜಯಕುಮಾರ್ ಜಮಖಂಡಿ, ಸಾಹೇಬ್ ಅಲಿ, ವಿಜಯಕುಮಾರ ತೆಗಲತಿಪ್ಪಿ, ನೀಲಕಂಠರಾವ ಮೂಲಗೆ, ಸೈಯದ್ ಮಹಮೂದ್ ಪಟೇಲ್, ಹೈದರ್ ಅಲಿ ಬಾಗವಾನ್, ಸೈರಾ ಬಾನು, ಸಾಜಿದ್ ಕಲ್ಯಾಣಿ, ಶೇಖ ಹುಸೇನ್ ಬಾಬಾ, ಅಮೃತ ಪಾಟೀಲ, ಸಚೀನ ಶೀರವಾಳ, ಇಲಿಶ್ ಬಾಬು ಬುಲ್ಡಾ, ವಿಜಯಕುಮಾರ್ ಕಟ್ಟಿಮನಿ, ಬಾಬು ಬೆನ್ನೂರು, ಶಿವನಂದ ಉಪ್ಪಿನ್, ಬಸವರಾಜ್ ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here