ಕಲಬುರಗಿ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡ ಡಾ.ರಶೀದ್‍ಗೆ ಸನ್ಮಾನ

0
39

ಶಹಾಬಾದ: ಕಲಬುರಗಿ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ರಶೀದ್ ಮರ್ಚಂಟ್ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಇವರು ಇಲ್ಲಿನ ಯಾವುದೇ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯಲು ಮುಖ್ಯ ಕಾರಣೀಭೂತರಾಗಿದ್ದಾರೆ. ವೃತ್ತಿಯಿಂದ ವೈದ್ಯಾರಗಿರುವ ಇವರು ನಗರದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಛಾಪನ್ನು ಮೂಡಿಸಿರುವ ಏಕೈಕ ವ್ಯಕ್ತಿ ಡಾ.ರಶೀದ್ ಮರ್ಚಂಟ. ತಾಲೂಕಿನಲ್ಲಿಯೇ ಅವರದೇ ಆದ ಖದರ್, ವ್ಯಕ್ತಿತ್ವ ಹೊಂದಿದ್ದು ಅದರಿಂದಲೇ ಹೆಸರುವಾಸಿಯಾಗಿದ್ದಾರೆ. ಬಡ ರೋಗಿಗಳಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಆಸ್ಪತ್ರೆ ಬಾಗಿಲನ್ನು ಹಾಕದೇ ಸಾವಿರಾರು ರೋಗಿಗಳಿಗೆ ಉತ್ತಮ ಸೇವೆ ನೀಡಿದ್ದ ಹೆಗ್ಗಳಿಕೆ ಇವರದ್ದು. ಬಡ ರೋಗಿಗಳ ಪಾಲಿನ ದೇವರಾಗಿದ್ದಾರೆ.

Contact Your\'s Advertisement; 9902492681

‘ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಅವಮಾನ , ಆದರ್ಶವಿಲ್ಲದೇ ಸತ್ತರೇ ಬದುಕಿಗೆ ಅವಮಾನ’ ಎಂಬಂತೆ ದೃಢ ಸಂಕಲ್ಪದಿಂದ ಯಾರಿಗೆ ಯಾವ ಸಮಯದಲ್ಲಿ ಕಷ್ಟಗಳಿಗೆ ಅಂಜದೇ ಸಮಾಜದ ಎಲ್ಲಾ ವರ್ಗದವರಿಗೂ ಚಿಕಿತ್ಸೆ ನೀಡಿದ ಬಡವರ ಪಾಲಿನ ಸಂಜೀವಿನಿ ಡಾಕ್ಟರ್ ಅಂತಾನೇ ಕರೆಯಲಾಗುತ್ತದೆ.ಇಂತಹ ವ್ಯಕ್ತಿಗೆ ಕಾಡಾ ಅಧ್ಯಕ್ಷರನ್ನಾಗಿ ಮಾಡಿದ ರಾಷ್ಟ್ರೀ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ,ಸಚಿವ ಶರಣ ಪ್ರಕಾಶ ಪಾಟೀಲ ಹಾಗೂ ಇತರ ಶಾಸಕರಿಗೆ ಅಭಿನಂದಿಸುತ್ತೆನೆ ಎಂದರು.

ಮುಖಂಡ ಮುನ್ನಾ ಪಟೇಲ್ ಮಾತನಾಡಿ,ಸರಳತೆ ಹಾಗೂ ಪಕ್ಷದ ನಿಷ್ಠೆಗೆ ಕಾಡಾ ಅಧ್ಯಕ್ಷ ಸ್ಥಾನ ಡಾ.ರಶೀದ್ ಅವರಿಗೆ ಲಭಿಸಿರುವುದು ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ವಿಜಯಕುಮಾರ ಚವ್ಹಾಣ, ಸತೀಶ ಚವ್ಹಾಣ,ಆಮೀರ ಮರ್ಚಂಟ್,ಅಜಯ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here