ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ರನ್ನರ್ಸ್ ಅಪ್ ಪ್ರಶಸ್ತಿ

0
9

ಕಲಬುರಗಿ: ಮಾರ್ಚ್ 04 ಮತ್ತು 05 ರಂದು ರಾಯಚೂರಿನಲ್ಲಿ ಕಲಬುರಗಿ ವಲಯ ಮಟ್ಟದ ಯವಜನೋತ್ಸವವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಶೇಶ್ ಚುನ್ನಿಲಾಲ್ ಅಮರಚಂದ್ ಬೋರಾ ಕಾನೂನು ಮಹಾವಿದ್ಯಾಲಯ ರಾಯಚೂರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಈ ಯುವಜನೋತ್ಸವದಲ್ಲಿ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಆಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಈ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ತಂದು ಮಹಾವಿದ್ಯಾಲಯದ ಗೌರವವನ್ನು ಹೆಚ್ಚಿಸಿದಕ್ಕಾಗಿ ಕೆ.ಪಿ.ಎ. ಸೋಸಾಯಿಟಿಯ ಕಾರ್ಯದರ್ಶಿ ಶಾಂತಪ್ಪ ಸೂರನ್, ಆಡಳಿತಾಧಿಕಾರಿ ಚಂದ್ರಶೇಖರ್ ಶೀಲವಂತ, ಪ್ರಾಂಶುಪಾಲರಾದ ಡಾ: ಎಸ್.ಚಂದ್ರಶೇಖರ್, ಉಪನ್ಯಾಸಕರಾದ ಡಾ: ಅಪರ್ಣಾ.ಜೆ.ಶಿಂಧೆ, ಡಾ: ತಿಪ್ಪೇಸ್ವಾಮಿ ಹಾಗೂ ಆಡಳಿತ ವರ್ಗದ ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿ ಮುಂದಿನ ಸ್ಪರ್ಧೆಗಳಿಗೆ ಶುಭ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here