ವೃತ್ತಿಗೆ ನಿವೃತ್ತಿ-ಪ್ರವೃತ್ತಿಗೆ ನಿವೃತ್ತಿಯಿಲ್ಲ

0
7

ಶಹಾಬಾದ: ನಿವೃತ್ತಿ ಎಂಬುದು ವೃತ್ತಿಗೆ ಮಾತ್ರವಾಗಿದ್ದು, ಪ್ರವೃತ್ತಿಗೆ ಎಂದು ನಿವೃತ್ತಿಯಿಲ್ಲ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.

ಅವರು ನಗರದ ಎಚ್.ಎಮ್.ಪಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷರಾದ ಸಿದ್ರಾಮ ಉದಯಕರ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಎಲ್ಲಾ ವೃತ್ತಿಗಿಂತ ಶಿಕ್ಷಣ ಇಲಾಖೆಯ ಸೇವೆ ಅತ್ಯಂತ ವಿಶೇಷವಾಗಿದ್ದು, ಇದನ್ನು ತಮ್ಮ ಸೇವಾ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ವೃತ್ತಿಗೆ ಗೌರವ ಸಲ್ಲಿಸಿದರು. ಸಿದ್ರಾಮ ಉದಯಕರ್ ಅವರ ನಿವೃತ್ತಿ ಜೀವನ ಆರೋಗ್ಯಕರವಾಗಿರಲಿ ಎಂದು ಹೇಳಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಇವರು ತಮ್ಮ ಸೇವಾವಧಿಯಲ್ಲಿ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ತೊಡಗಿಸಿಕೊಂಡಿರುತ್ತಿದ್ದರು. ಅಲ್ಲದೇ ಸಹಶಿಕ್ಷಕರ ಜತೆ ಕೌಟುಂಬಿಕ ವಾತಾವರಣವನ್ನು ನಿರ್ಮಾಣ ಮಾಡಿ ಶಾಲಾ ಅಭಿವೃದ್ಧಿಯಾಗಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ರಾಮ್ ಉದಯಕರ್ ಮಾತನಾಡಿ, ಸಮಾಜ ಪರಿವರ್ತನೆಗೆ ಹಾಗೂ ಸಮಾಜದ ಋಣ ತೀರಿಸುವಲ್ಲಿ ಈ ಇಲಾಖೆಯಲ್ಲಿ ಇಂಥದೊಂದು ಅವಕಾಶ ನನಗೆ ಒದಗಿ ಬಂದಿರುವದು ನನ್ನ ಸೌಭಾಗ್ಯ. ನನ್ನ ಸೇವಾವಧಿ ಉತ್ತಮವಾಗಿರಲು ಶಾಲಾ ಶಿಕ್ಷಕ ವರ್ಗದವರ ಸಹಕಾರವೇ ಕಾರಣ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ,ಕದಸಂಸ ರಾಜ್ಯ ಸಂ. ಸಂಚಾಲಕ ಡಾ. ಮಲ್ಲೇಶಿ ಸಜ್ಜನ, ಪತ್ರಕರ್ತ ಬಿವಿ ಚಕ್ರವರ್ತಿ, ಡಾ. ನಾಗಭೂಷಣ, ಮಹ್ಮದ ಸಲಿಂ ಮಾತನಾಡಿದರು.ವರಜ್ಯೋತಿ ಭಂತೆಜೀ ಸಾನಿಧ್ಯ ವಹಿಸಿದ್ದರು. ಎಚ್.ಎಮ್.ಪಿ ಶಾಲೆಯ ಕಾರ್ಯದರ್ಶಿ ಸುನಿಲ ಭಗತ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷ ಅಜೀತ ಪಾಟೀಲ, ಪ್ರಾಶಾಶಿಸಂ ಅಧ್ಯಕ್ಷ ಶಿವಪುತ್ರ ಕರಣಿಕ, ವೆಂಕಟೇಶ ನಿರಡಗಿ ಇದ್ದರು.
ಭರತ ಧನ್ನಾ ಸ್ವಾಗತಿಸಿದರು. ಮುಖಂಡ ಸುರೇಶ ಮೆಂಗನ ನಿರೂಪಿಸಿದರು, ಬಸವರಾಜ ಮಯೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here