ಚಿತ್ತಾಪೂರ ಕರದಾಳ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು: ಸೂಕ್ತ ತನಿಖೆಗೆ ಆಗ್ರಹ

0
17

ಚಿತ್ತಾಪುರ: ಕಸ್ತೂರಬಾ ವಸತಿ ನಿಲಯದಲ್ಲಿ 2 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಭಾಗ್ಯಶ್ರೀ ಸಾಯಿಬಣ್ಣ ನಾಯ್ಕೋಡಿಯು ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಕುರಿತು ನಿಷ್ಪಕ್ಷವಾಗಿ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಓ ಆಗ್ರಹಿಸಿದೆ.

ಇಂದು ಎಐಡಿಎಸ್ಓ ನ ನಿಯೋಗವು ಕಸ್ತೂರಿ ಬಾ ವಸತಿ ನಿಲಯ ಕರದಾಳಕ್ಕೆ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸ್ನೇಹಾ ಕಟ್ಟೀಮನಿ, ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷರಾದ ಗೋವಿಂದ ಯಳವಾರ ಹಾಗೂ ಸಿದ್ದಾರ್ಥ್ ತಿಪ್ಪನೋರ ನಿಯೋಗ ಭೇಟಿ ಮಾಹಿತಿ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here