ಕುಂಬಾರಪೇಟ :ಆರ್.ವಿ.ನಾಯಕ ಅಭಿಮಾನಿ ಬಳಗ ಶ್ರದ್ಧಾಂಜಲಿ

0
10

ಸುರಪುರ :ನಗರದ ಕುಂಬಾರಪೇಟೆಯ ಸುಜನ್ ಟ್ರೇಡರ್ಸ ಆವರಣದಲ್ಲಿ ಆರ್‍ವಿಎನ್ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾಚಿತ್ರಕ್ಕೆ,ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ,ಎರಡು ನಿಮಿಷಗಳ ಮೌನಚಾರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

Contact Your\'s Advertisement; 9902492681

ನಂತರ ಅನೇಕ ಮುಖಂಡರು ಮಾತನಾಡಿ,ನಮ್ಮ ನಾಯಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು,ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರದ ಸಮಗ್ರ ಅಭಿವೃಧ್ಧಿಗೆ ನಿರಂತರವಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದರು,ಅವರು ಇನ್ನೂ ಅನೇಕ ಕಾಲ ಇದ್ದು ಅಭಿವೃಧ್ಧಿ ಮಾಡಬೇಕಿತ್ತು,ಉಗ್ರಾಣ ನಿಗಮದ ಅಧ್ಯಕ್ಷರಾಗಿ ರಾಜ್ಯದ ರೈತರ ಅಭಿವೃಧ್ಧಿ ಮಾಡುತ್ತಿದ್ದರು,ಅಂತಹ ನಾಯಕರನ್ನು ಕಳೆದುಕೊಂಡ ನಾವೆಲ್ಲರು ಬಡವಾಗಿದ್ದೇವೆ,ಅವರ ಆದರ್ಶ ನಮ್ಮಂತ ಲಕ್ಷ ಲಕ್ಷ ಜನರಿಗೆ ಪ್ರೇರಣೆಯಾಗಿದೆ,ಇಂದು ಅವರಿಲ್ಲ ಎನ್ನುವುದು ತುಂಬಾ ನೋವಿನ ಸಂಗತಿಯಾಗಿದೆ,ಅವರ ಸ್ಥಾನವನ್ನು ತುಂಬಲು ನಾವೆಲ್ಲರು ರಾಜಾ ವೇಣುಗೋಪಾಲ ನಾಯಕರಿಗೆ ಸಹಕಾರ ನೀಡೋಣ ಎಂದರು.

ಮುಖಂಡರಾದ ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ಭೀಮರಾಯ ಮೂಲಿಮನಿ, ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ, ದಾವೂದಸಾಬ, ದಶರಥ ಪ್ಯಾಪಲಿ, ಮಲ್ಲಣ್ಣ ಹುಬ್ಬಳ್ಳಿ, ಸಿದ್ದಪ್ಪ ಗುಡ್ಡಕಾಯಿ, ಸೂಗರಾಜ ಪಾಣಿ, ಚಂದ್ರು ದನಕಾಯಿ, ಮಲ್ಲಪ್ಪ ಕೆಂಗೂರಿ,ಭೀಮರಾಯ ಕುಂಬಾರ,ಪ್ರಕಾಶ ಪಗಡೆಕಲ್,ಹಣಮಂತ್ರಾಯ ಭಜಂತ್ರಿ,ಬಸವರಾಜ ದೀವಳಗುಡ್ಡ,ರವಿ ಕುಂಬಾರ, ಬಲಭೀಮ ನಾಯಕ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here