ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನೀಡಬೇಕು

0
15

ಸುರಪುರ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಬೇಕು ಎಂದು ವಿಶ್ವ ಹಿಂದೂ ರಕ್ಷಣಾ ಸೇನೆಯ ಅನೇಕರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು,ಪ್ರತಾಪ್ ಸಿಂಹ ಒಬ್ಬ ದೂರದೃಷ್ಟಿಯ ಅಭಿವೃಧ್ಧಿ ಕನಸು ಹೊಂದಿರುವ ಸಂಸದರಾಗಿದ್ದಾರೆ,ಅವರು 10 ವರ್ಷದಲ್ಲಿ 11 ರೈಲುಗಳನ್ನು ತಂದಿರುವುದು ದೊಡ್ಡ ಸಾಧನೆಯಾಗಿದೆ,ಅಲ್ಲದೆ ಮೈಸೂರನ್ನು ಗ್ರೇಟರ್ ಮೈಸೂರು ಆಗಿ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡು,ಅಂತರಷ್ಟ್ರೀಯ ವಿಮಾನ ನಿಲ್ದಾಣ,ಮೆಟ್ರೋ ಮತ್ತು ಪೆರಿಫೆರಲ್ ರಿಂಗ್ ರೋಡ್ ಆಗಿ ಪರಿವರ್ತಿಸುವ ಯೋಜನೆಗಳೊಂದಿಗೆ ಕೊಡಗಿಗೆ ದೃಢವಾದ ಸಂಪರ್ಕವನ್ನು ಖಾತರಿಪಡಿಸುವ ಹಾಗೂ ಅಭಿವೃಧ್ಧಿಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿರುವ ಸಂಸದರು ಮತ್ತು ಉಗ್ರಗಾಮಿ ಸಿದ್ದಾಂತವನ್ನು ಕಟುವಾಗಿ ವಿರೋಧಿಸುತ್ತಾರೆ.

Contact Your\'s Advertisement; 9902492681

ಹಾಗಾಗಿ ಬಿಜೆಪಿ ಪಕ್ಷ 2024ರ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕೆಂದು ರಾಜ್ಯದ ಹಾಗೂ ಕೇಂದ್ರದ ಬಿಜೆಪಿ ನಾಯಕರುಗಳಿಗೆ ಕರ್ನಾಟಕ ರಾಜ್ಯದ ವಿಶ್ವ ಹಿಂದೂ ರಕ್ಷಣಾ ಸೇನಾ ರಾಜ್ಯಾಧ್ಯಕ್ಷರಾದ ಅರ್ಜುನ್ ಪಾರ್ಥ ಮತ್ತು ರಾಜ್ಯ ಪದಾಧಿಕಾರಿಗಳ ಪರವಾಗಿ ಆಗ್ರಹಿಸುವುದಾಗಿ ಮುಖಂಡರಾದ ಬಸವ ಶಾಸ್ತ್ರಿ ಕೋನಾಳ,ಶರಣು ನಾಯಕ ದೀವಳಗುಡ್ಡ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here