ಗೋಲ್ಡನ್ ಕೇವ್ ಬುದ್ಧ ವಿಹಾರದ ಅಭಿವೃಧ್ಧಿಗೆ ಸರಕಾರ ಅನುದಾನ ನೀಡಲಿ

0
12

ಸುರಪುರ: ನಿರ್ಸದ ಮಡಿಲಲ್ಲಿ ನಿರ್ಮಾಣಗೊಂಡಿರುವ ಗೋಲ್ಡನ್ ಕೇವ್ ಬುದ್ಧ ವಿಹಾರ ತುಂಬಾ ರಮಣಿಯವಾಗಿದೆ ಪ್ರೇಕ್ಷಣಿಯ ಸ್ಥಳವಾಗಲೂ ಏನು ಕಮ್ಮಿಯಿಲ್ಲ ,ಇನ್ನೂ ಹೆಚ್ಚಿನ ಅಭಿವೃಧ್ಧಿ ಹೊಂದಲು ಸರಕಾರ ಅನುದಾನ ನೀಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸುರೇಶ್ ನಿಂಬಾಳಕರ್ ಮಾತನಾಡಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರಕ್ಕೆ ಭೇಟಿ ನೀಡಿ ಮಾತನಾಡಿ,ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಇಲ್ಲಿರುವ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.ಅಲ್ಲದೆ ಇಂತಹ ಒಂದು ಸ್ಥಳವನ್ನು ಈಗಾಗಲೇ ಉತ್ತಮವಾದ ರೀತಿಯಲ್ಲಿ ಅಭಿವೃಧ್ಧಿ ಕಾರ್ಯ ಮಾಡಿದ್ದು ಇನ್ನಷ್ಟು ಅಭಿವೃಧ್ಧಿ ಕಾರ್ಯಕ್ಕೆ ಎಲ್ಲಾ ರೀತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬೌದ್ಧ ಸಾಹಿತಿ ಹಾಗೂ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಖಜಾಂಚಿ ದೇವೆಂದ್ರ ಹೆಗ್ಗಡೆ,ಅಧ್ಯಕ್ಷ ವೆಂಕಟೇಶ ಹೊಸ್ಮನಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ,ಭೀಮರಾಯ ಸಿಂಧಗೇರಿ,ಜಗದೀಶ ಶಾಖನವರ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here