ಹಿರಿಯ ನಾಗರಿಕರಿಗೆ ರೈಲ್ವೆಗಳಲ್ಲಿ ಶೆ.50 ರಿಯಾಯ್ತಿದರದಲ್ಲಿ ಪಾಸ್ ನೀಡಲು ಒತ್ತಾಯಿಸಿ ಪ್ರತಿಭಟನೆ

0
13
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಬೇಕೆಂದು ಒತ್ತಾಯಿಸಿ ಹೊಂಗಿರಣ ತಾಲೂಕು ಹಿರಿಯ ನಾಗರಿಕ, ನಾಗರಿಕಿಯರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ತಹಶೀಲ್ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್ ಸೈಯದ್ ಶಾಹವಲಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ರೋಣದ್, ಶಾಮರಾವ್ ಗಾರಂಪಳ್ಳಿ, ಮಲ್ಲಿನಾಥ ಪಾಟೀಲ್, ಚನ್ನಬಸಪ್ಪ, ತಾಹೇರಮಿಯಾ, ಮರೇಪ್ಪ, ಚಂದ್ರಶಾ, ಅಬ್ದುಲ್ ಖಾದರ್, ನಾಗೇಂದ್ರ ಬುರ್ಲಿ, ಮನೋಹರ, ಮಹೇಬೂಬ ಸಾಬ್, ಶಿವರಾಯ ದೊಡ್ಮನಿ, ರಾಜೇಂದ್ರ, ಭೀಮಣ್ಣ, ಮಶಾಖ ಪಟೇಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here