5 ಟಿಎಂಸಿ ನೀರು ಭೀಮಾ ನದಿಗೆ ಹರಿಸಲು ಡಿಸಿ ಕಚೇರಿ ಎದುರು ಪ್ರತಿಭಟನೆ

0
11

ಕಲಬುರಗಿ; ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಲು ತಮ್ಮ ಕಾರ್ಯಾಲಯದ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಮಾನ್ಯ ರಾಜ್ಯದ ರಾಜಪಾಲರಿಗೆ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರು ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ ನಮ್ಮ ಕರ್ನಾಟಕ ಸೇನೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸದರು ಕೂಡ ಸರಕಾರವು ಯಾವುದೆ ಕ್ರಮ ಕೈಗೊಂಡಿರುವದಿಲ್ಲ.

Contact Your\'s Advertisement; 9902492681

ದಿನೆ ದಿನೆ ಭೀಮಾ ನದಿಯ ನೀರು ಬರಿದಾಗುತ್ತಿದ್ದು ಜಿಲ್ಲೆಯ ಸುಮಾರು ಜನರು ಭೀಮಾ ನದಿಯನ್ನೆ ಅವಲಂಬಿಸಿರುತ್ತಾರೆ ಅದರಿಂದ ಸಾವಿರಾರು ಏಕರೆ ಜಮೀನುಗಳು ಉಪ ಜೀವನಕ್ಕಾಗಿ ಕಬ್ಬು ಮತ್ತು ಬಾಳೆ ಬೆಳೆಯನ್ನೇ ಅವಲಂಭಿಸಿರುತ್ತಾರೆ, ನೀರು ಹರಿಸದೆ ಇರುವದರಿಂದ ಸಾವಿರಾರು ಜಾನುವಾರುಗಳು ನೀರಿಲ್ಲದೆ ಸಾವನಪ್ಪುತ್ತಿವೆ, ನೀರಿನ ಸಮಸ್ಯೆ ನಮ್ಮ ಕಲಬುರಗಿಯಲ್ಲಿ ದಿನೆ ದಿನೆ ಉಲ್ಬಣ ವಾಗುತ್ತಿದ್ದು, ಕಲಬುರಗಿ ಜನರು ಕುಡಿಯುವ ನೀರಿಗಾಗೆ ಭೀಮಾನದಿಯನ್ನೆ ಅವಲಂಬಿಸಿದ್ದು ಅಲ್ಲದೆ ವಿಷೇಶವಾಗಿ ಅಫಜಲಪೂರ. ಜೇವರ್ಗಿ ತಾಲೂಕಿನ ರೈತರು ನೀರಾವರಿಗಾಗಿ ಭಿಮಾನದಿಯನ್ನೆ ಅವಲಂಬಿಸಿರುತ್ತಾರೆ.

ರಾಜ್ಯ ಪಾಲರಿಗೂ ಮತ್ತು ಮುಖ್ಯ ಮಂತ್ರಿಗಳಿಗೂ ಸದರಿ ವಿಷಯದ ಬಗ್ಗೆ ಮನವಿ ಸಲ್ಲಿಸಿ, ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಗುತ್ತೇದಾರ್, ಜಿಲ್ಲಾ ಸಂಚಾಲಕ ರಾಜು ನಿಂಬಾಳ್ಕರ್, ಗೌರವ ಅಧ್ಯಕ್ಷ ವೆಂಕಟೇಶ ಗುತ್ತೇದಾರ, ರುಕ್ಮಯ ಗುತ್ತೇದಾರ, ಭಾಗ್ಯವಂತ ಗಡ್ಡಿಮನಿ, ಮೌನೇಶ್ ಬೆನಕನಹಳ್ಳಿ, ನಾಗರಾಜ್ ಸನ್ನೂರಕರ, ಮಹಾಂತೇಶ ಸಣಮನಿ, ವಂದನಾ ಅಕ್ಕ, ಚಂದ್ರಕಾಂತ ಗುತ್ತೇದಾರ್, ದೇವು ರಾಜೋಳಿ, ಮೇಲು ಕೂಡದುರ, ದೇವು ಗಮಗಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here