ಬಸವ ಜಯಂತಿಗೆ ವಿಶ್ವಗುರು ಬಸವಣ್ಣನ ಮೂರ್ತಿ ಲೋಕಾರ್ಪಣೆ

0
32

ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿ ಸ್ಥಾಪಿಸಲಾಗಿರುವ ವಿಶ್ವಗುರು ಸಾಂಸ್ಕøತಿಕ ನಾಯಕ ಬಸವಣ್ಣನವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಮುಂಬರುವ ಬಸವ ಜಯಂತಿಗೆ ನೆರವೇರಿಸಲಾಗುವುದು ಎಂದು ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ:ಸುರೇಶ ಸಜ್ಜನ್ ತಿಳಿಸಿದರು.

ನಗರದಲ್ಲಿ ಈ ಕುರಿತು ಮಾತನಾಡಿ,ಕಳೆದ ವರ್ಷದ ಬಸವ ಜಯಂತಿಯಂದು ಮೂರ್ತಿ ಸ್ಥಾಪಿಸಲಾಗಿದೆ,ಆಗಲೂ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಇದ್ದಕಾರಣ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.ಈಬಾರಿ ಮೂರ್ತಿ ಸ್ಥಾಪನೆಯ ಎರಡನೇ ವರ್ಷಾಚರಣೆ ಜೊತೆಗೆ ಲೋಕಾರ್ಪಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.ವೀರಶೈವ ಲಿಂಗಾಯತ ಸಮಿತಿ,ಬಸವೇಶ್ವರ ಪತ್ತಿನ ಸಹಕಾರ ಸಂಘ,ಅಖಿಲ ಭಾರತ ವೀರಶೈವ ಲಿಂಗಾಯ ಮಹಾಸಭಾ ಸೇರಿದಂತೆ ಯುವ ವೇದಿಕೆ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯ ಎಲ್ಲಾ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

Contact Your\'s Advertisement; 9902492681

ಈಗಾಗಲೇ ಬಸವೇಶ್ವರರ ಮೂರ್ತಿ ಕೆಳ ಭಾಗದಲ್ಲಿ ಸರಕಾರ ಅಧಿಕೃತವಾಗಿ ಘೋಷಿಸಿರುವ ವಿಶ್ವಗುರು ಬಸವಣ್ಣ ಸಾಂಸ್ಕøತಿಕ ನಾಯಕ ಭಾವಚಿತ್ರ ಹಾಕಲಾಗುವದು,ಮೂರ್ತಿ ಸುತ್ತಲ ಸ್ಥಳದಲ್ಲಿ ಬಸವಣ್ಣ ಸೇರಿ ಅನೇಕ ಶರಣರು ಬರೆದ ವಚನಗಳನ್ನು ಹಾಕಲಾಗುವುದು,ಇದಕ್ಕೆಲ್ಲ ತುಂಬಾ ಸಮಯ ಬೇಕಾಗಲಿದೆ,ಈಗಾಗಲೇ ಒಂದುವರೆ ತಿಂಗಳಿಂದ ಇದರ ಕಾರ್ಯ ಕಲಬುರ್ಗಿಯಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.

ಮೇ 10 ರಂದು ಬಸವ ಜಯಂತಿ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ,ಧರ್ಮದ ಜನರು ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಹೆಚ್.ಸಿ ಪಾಟೀಲ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here