ಹೆಣ್ಣು ಮನಸ್ಸು ಮಾಡಿದರೆ ಕಠಿಣ ಕೆಲಸವನ್ನಾದರೂ ಮಾಡಲು ಸಾಧ್ಯ; ಮೀನಾಕ್ಷಿ ಬಾಳಿ

0
19

ಶಹಾಬಾದ: ಮಹಿಳೆಯರು ಕೀಳರಿಮೆ ಬದಿಗಿಟ್ಟು ಸಾಧನೆ ಮಾಡಲು ಮುಂದಾಗಬೇಕು. ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕಠಿಣ ಕೆಲಸವನ್ನಾದರೂ ಮಾಡಲು ಸಾಧ್ಯ’ ಎಂದು ಜನವಾದಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದರು.

ಅವರು ನಗರದಲ್ಲಿ ತಾಲೂಕಾ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

Contact Your\'s Advertisement; 9902492681

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಆರ್ಥಿಕ, ಶೈಕ್ಷಣಿಕ ,ಸಾಮಾಜಿಕ ರಾಷ್ಟ್ರೀಯ ,ಅಂತರಾಷ್ಟ್ರೀ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಸಮಾನತೆ ಎಲ್ಲಿರುತ್ತದೋ ಅದೇ ಬಲವಾದ ದೇಶವಾಗುತ್ತದೆ. ಮಹಿಳೆ ಒಂದು ಕುಟುಂಬದ ನಿರ್ವಹಣೆಯಲ್ಲಿ ಪುರುಷರμÉ್ಠೀ ಪ್ರಮುಖ ಪಾತ್ರವಹಿಸಿದ್ದಾಳೆ. ಇಂದು ಮಹಿಳಾ ದಿನಾಚರಣೆಯಂದು ಕೇವಲ ಕಾಟಾಚಾರದ ಆಚರಣೆ ಮಾಡಿದರೆ ಸಾಲದು ಪ್ರತಿಯೋಬ್ಬರು ಅವರನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.

ವಚನ ಸಾಹಿತ್ಯಕ್ಕೆ ಮಹಿಳೆಯರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಧ್ಯಾತ್ಮದ ಶಿಖರವನ್ನೇರಿದ ಅಕ್ಕಮಹಾದೇವಿ ಎಲ್ಲ ಮಹಿಳೆಯರಿಗೆ ಮಾದರಿ ಆಗಲಿ’ ಎಂದರು.

ಮಹಿಳೆ ಅಬಲೆಯಲ್ಲ ಅವಳೂ ಕೂಡಾ ಸಬಲಳು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರμÉ್ಠ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದು ಹೇಳಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, 12ನೇ ಶತಮಾನ ಸ್ತ್ರೀಯರಿಗೆ ಸಮಾನತೆಯನ್ನು ನೀಡಿದ ಕಾಲ.ಅಂದಿನ ಶಿವಶರಣೆಯರಾದ ಅಕ್ಕಮಹಾದೇವಿ, ನಿಂಬೇಕ್ಕ, ನೀಲಮ್ಮಾ,ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕರು ಮೌಲ್ಯಯುತವಾದ ಸಾಹಿತ್ಯವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಸಮಾಜಕ್ಕಾಗಿ ಬಡವರಿಗಾಗಿ ದುಡಿದ ಮದರ್‍ಥೆರೇಸಾ, ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರರಾಣಿ ಚೆನ್ನಮ್ಮಾ .ಕಲ್ಪನಾ ಚಾವ್ಲಾ ಅಂತಹ ಅನೇಕ ಆದರ್ಶ ಮಹಿಳೆಯರು ನಮ್ಮ ಮುಂದೆ ಆಗಿ ಹೋಗಿದ್ದಾರೆ.

ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದಾರೆ. ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ.ಆದರೆ ಇಂದು ಮಹಿಳೆಯ ಮೇಲೆ ನಿತ್ಯ ನಡೆಯುತ್ತಿರುವ ಶೋಷಣೆ ನಿಲ್ಲಬೇಕಾಗಿದೆ ಎಂದರು.

ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆಸಾಬಮ್ಮ ಕಾಳಗಿ, ಕಲಬುರಗಿ ಅಂಗವಾಡಿ ನೌಕರರÀ ಸಂಘದ ನಗರ ಕಾರ್ಯದರ್ಶಿ ರತ್ನ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ,ನಗರ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಮೈತ್ರಾ ತಳವಾರ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ರಾಯಪ್ಪ ಹುರಮುಂಜಿ, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಮಂಜುಳಾ ಗುಡುಬಾ, ಲಕ್ಷ್ಮೀ ಜಾಧವ, ಸುವರ್ಣ, ಅಂಬುಜಾ, ರುದ್ರಮ್ಮಾ, ಶಾಂತಾ ಹೀರೆಮಠ, ಉಮಾ ವಾಡಿ ಇದ್ದರು.

ಸುಜಾತಾ ಕಡೆಹಳ್ಳಿ ನಿರೂಪಿಸಿದರು, ಮೈತ್ರಾಬಾಯಿ ತಳವಾರ ಸ್ವಾಗತಿಸಿದರು, ಕಸ್ತೂರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here